alex Certify ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡ ವರುಣಾ ಕ್ಷೇತ್ರದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡ ವರುಣಾ ಕ್ಷೇತ್ರದ ಜನ

ಮೈಸೂರು: ಸಚಿವ ವಿ.ಸೋಮಣ್ಣ ಪರ ಪ್ರಚಾರಕ್ಕೆ ತೆರಳಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ವರುಣಾ ಕ್ಷೇತ್ರದ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ವರುಣಾ ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬರುತ್ತಿದ್ದಂತೆ ಅವರಿಗೆ ಘೇರಾವ್ ಹಾಕಿದ ಜನರು ಪ್ರಶ್ನೆ ಮೇಲೆ ಪ್ರಶ್ನೆ ಮುಂದಿಟ್ಟಿದ್ದಾರೆ. ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು ಎಂದು ಪ್ರಶ್ನೆ ಮಾಡ್ತೀರಾ? ಅವರ ಬಳಿ ಹೋಗಿ ಕುಳಿತುಕೊಳ್ಳಿ ಆಗ ಗೊತ್ತಾಗುತ್ತೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರು ಅಕ್ಕಿ ಕೊಟ್ಟಿದ್ದಾರೆ. ಆದರೆ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದೀರಾ. ಅಕ್ಕಿ ಕೊಟ್ಟಿದ್ದು ನಾವು ಚೀಲ ಮಾತ್ರ ಸಿದ್ದರಾಮಯ್ಯನವರದ್ದು ಎಂದು ಸುಳ್ಳು ಯಾಕೆ ಹೇಳ್ತೀರಾ? ಸಿದ್ದರಾಮಯ್ಯ ಸರ್ಕಾರದಲ್ಲಿ ಬರುತ್ತಿದ್ದ 10 ಕೆಜಿ ಅಕ್ಕಿ ಈಗ ಯಾಕೆ ಬರುತ್ತಿಲ್ಲ? ನಿಮ್ಮ ಸರ್ಕಾರದಲ್ಲಿ ಅಕ್ಕಿ ಯಾಕೆ ಕಡಿಮೆ ಕೊಡ್ತಿದ್ದೀರಾ? ಅಡಿಗೆ ಸಿಲಿಂಡರ್ ದರ ಯಾಕೆ ಗಗನಕ್ಕೇರಿದೆ? ಅಗತ್ಯ ವಸ್ತುಗಳ ಬೆಲೆ ಯಾಕೆ ಕಡಿಮೆ ಮಾಡಿಲ್ಲ? ಇಷ್ಟೆಲ್ಲ ಆದಮೇಲೂ ನಾವು ನಿಮಗೆ ಯಾಕೆ ಬೆಂಬಲ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ. ಜನರ ಆಕ್ರೋಶ, ಪ್ರಶ್ನೆಗಳಿಗೆ ಪೇಚಿಗೆ ಸಿಲುಕಿದ ಪ್ರತಾಪ್ ಸಿಂಹ, ನಿರುತ್ತರರಾಗಿ ನಿಂತ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...