alex Certify ಸಂತಾನ ಪ್ರಾಪ್ತಿಗಾಗಿ ಸುಬ್ರಹ್ಮಣ್ಯ ಷಷ್ಠಿ ದಿನ ಸ್ವಾಮಿಗೆ ಇದರಿಂದ ಅಭಿಷೇಕ ಮಾಡಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂತಾನ ಪ್ರಾಪ್ತಿಗಾಗಿ ಸುಬ್ರಹ್ಮಣ್ಯ ಷಷ್ಠಿ ದಿನ ಸ್ವಾಮಿಗೆ ಇದರಿಂದ ಅಭಿಷೇಕ ಮಾಡಿಸಿ

ಇಂದು ಸುಬ್ರಹ್ಮಣ್ಯ ಷಷ್ಠಿ ಇದೆ. ಇಂದಿನ ದಿನ ಸುಬ್ರಹ್ಮಣ್ಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮ ಸಕಲದೋಷಗಳು ಕಳೆದು ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ.

ಇಂದು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡುವಾಗ ದೀಪಾರಾಧನೆಯ ವೇಳೆ 2 ದೀಪಗಳನ್ನು ಇಟ್ಟು ಒಂದೊಂದು ದೀಪಕ್ಕೂ ಬಿಡಿ ಬಿಡಿಯಾದ ಮೂರು ಬತ್ತಿಗಳನ್ನು ಇಟ್ಟು ದೀಪಾರಾಧನೆ ಮಾಡಬೇಕು. ಹಾಗೇ ಸ್ವಾಮಿಗೆ ಹಾಲನ್ನು ನೈವೇದ್ಯವಾಗಿ ಇಡಬೇಕು. “ಓಂ ಶಾಂ ಶರವಣಭವ” ಎಂಬ ಮಂತ್ರವನ್ನು 21 ಬಾರಿ ಪಠಿಸಬೇಕು.

ಹಾಗೇ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯಕ್ಕೆ ತೆರಳಿ ಮೊಸರಿನಿಂದ ಸ್ವಾಮಿಗೆ ಅಭಿಷೇಕ ಮಾಡಿಸಿದರೆ ನಿಮ್ಮ ವಂಶಕ್ಕೆ ಸಂತಾನ ಫಲಪ್ರಾಪ್ತಿಯಾಗುತ್ತದೆ. ಹಾಗೇ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಜೇನುತುಪ್ಪದಿಂದ ಅಭಿಷೇಕ ಮಾಡಿಸಿ. ಅಕ್ಕಿ ಹಿಟ್ಟಿನಿಂದ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿದರೆ ಋಣಭಾದೆ ನಿವಾರಣೆಯಾಗುತ್ತದೆ, ಹಾಗೇ ಅಪಘಾತ, ಮರಣ ಭಯ ಕಾಡುತ್ತಿದ್ದರೆ ನಿಂಬೆ ರಸದಿಂದ ಅಭಿಷೇಕ ಮಾಡಿಸಿ. ಸಕ್ಕರೆಯಿಂದ ಸ್ವಾಮಿಗೆ ಅಭಿಷೇಕ ಮಾಡಿಸಿದರೆ ನಿಮ್ಮ ಸಕಲ ದೋಷಗಳು ನಿವಾರಣೆಯಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...