alex Certify ಶಿರಾಳಕೊಪ್ಪದ ಗೋಡೆ ಬರಹ ಕುರಿತು ಜಿಲ್ಲಾ ರಕ್ಷಣಾಧಿಕಾರಿಯವರಿಂದ ಮಹತ್ವದ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿರಾಳಕೊಪ್ಪದ ಗೋಡೆ ಬರಹ ಕುರಿತು ಜಿಲ್ಲಾ ರಕ್ಷಣಾಧಿಕಾರಿಯವರಿಂದ ಮಹತ್ವದ ಸ್ಪಷ್ಟನೆ

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಫೋಟೊ ಒಂದು ವೈರಲ್ ಆಗಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಿಷೇಧಿತ ಸಂಘಟನೆಯನ್ನು ಸೇರುವಂತೆ ಗೋಡೆ ಬರಹ ಬರೆಯಲಾಗಿದೆ ಎಂಬುದನ್ನು ತೋರಿಸಿತ್ತು.

ಈ ಕುರಿತು ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಈಶ್ವರಪ್ಪ ಸಹ ಮಾತನಾಡಿದ್ದರಲ್ಲದೆ ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸರು ಇದರ ತನಿಖೆ ನಡೆಸುತ್ತಾರೆ ಎಂದು ಹೇಳಿದ್ದರು.

ಇದೀಗ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಈ ಕುರಿತಂತೆ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಈ ಗೋಡೆ ಬರಹ ಈಗಿನದ್ದಲ್ಲ ಆ ಸಂಘಟನೆ ನಿಷೇಧಕ್ಕೂ ಮುನ್ನ ಬರೆಯಲಾಗಿತ್ತು ಎಂದು ಹೇಳಿರುವ ಅವರು, ಇದಕ್ಕೆ ಪೂರಕ ವಿಡಿಯೋಗಳು ಲಭ್ಯವಾಗಿವೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಶಿರಾಳಕೊಪ್ಪದಲ್ಲಿ ನಡೆದ ಗಣಪತಿ ಮೆರವಣಿಗೆ ವಿಡಿಯೋದಲ್ಲೂ ಸಹ ಈ ಬರಹ ಕಾಣುತ್ತಿದ್ದು, ಹೀಗಾಗಿ ಸಂಘಟನೆ ನಿಷೇಧಕ್ಕೂ ಮುನ್ನ ಬರೆದಿದ್ದ ಬರಹ ಎಂಬುದು ಸ್ಪಷ್ಟವಾಗಿದೆ. ಆದರೆ ಅದನ್ನು ಈಗ ನಡೆದ ಘಟನೆ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...