alex Certify ಶಾಸ್ತ್ರದ ಪ್ರಕಾರ ಶಿವರಾತ್ರಿಯಂದು ರಾಶಿಗನುಗುಣವಾಗಿ ಹೀಗೆ ಮಾಡಿ ʼಶಿವಾರಾಧನೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಸ್ತ್ರದ ಪ್ರಕಾರ ಶಿವರಾತ್ರಿಯಂದು ರಾಶಿಗನುಗುಣವಾಗಿ ಹೀಗೆ ಮಾಡಿ ʼಶಿವಾರಾಧನೆʼ

ಅನಂತನಾಗಿರುವುದ್ರಿಂದ ಶಿವನ ಆರಾಧನೆ ಎಷ್ಟು ಮಾಡಿದ್ರೂ ಅದು ಕಡಿಮೆಯೇ. ಶಿವನಿಂದಲೇ ಎಲ್ಲವೂ ಶುರುವಾಗುತ್ತದೆ. ಶಿವನಿಂದಲೇ ಅಂತ್ಯವಾಗುತ್ತದೆ. ಆದ್ರೆ ಶಿವನಿಗೆ ಮಾತ್ರ ಆದಿ-ಅಂತ್ಯವಿಲ್ಲ. ವಿಧಿ-ವಿಧಾನದ ಮೂಲಕ ಶಿವನ ಆರಾಧನೆ ಮಾಡಿದ್ರೆ ಶಿವರಾತ್ರಿಯಂದು ಶಿವನನ್ನು ಒಲಿಸಿಕೊಳ್ಳಲು ಸಾಧ್ಯ. ಶಾಸ್ತ್ರದ ಪ್ರಕಾರ ರಾಶಿಗನುಗುಣವಾಗಿ ಶಿವನ ಆರಾಧನೆ ಮಾಡಬೇಕು.

ಮೇಷ : ಮೇಷ ರಾಶಿಯವರು ಶಿವನಿಗೆ ಹೂವನ್ನು ಅರ್ಪಿಸಿ ಪೂಜೆ ಮಾಡಬೇಕು. ಈ ರಾಶಿಯವರು ಶಿವರಾತ್ರಿಯಂದು ಜಲಕ್ಕೆ ಬೆಲ್ಲವನ್ನು ಸೇರಿಸಿ ಶಿವನಿಗೆ ಅಭಿಷೇಕ ಮಾಡಬೇಕು.ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು.

ವೃಷಭ : ಈ ರಾಶಿಯವರು ಮಹಾ ಶಿವರಾತ್ರಿಯಂದು ಮೊಸರು ಮತ್ತು ಜಲವನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿ ಶಿವ ಸ್ತುತಿಯನ್ನು ಜಪಿಸಬೇಕು.

ಮಿಥುನ : ಮಿಥುನ ರಾಶಿಯವರು ಕಬ್ಬಿನ ಹಾಲನ್ನು ಶಿವನಿಗೆ ಅಭಿಷೇಕ ಮಾಡಬೇಕು. ಬಿಲ್ವ ಪತ್ರೆಯನ್ನು ಅರ್ಪಿಸಿ ಸುಖ-ಶಾಂತಿಗೆ ಪ್ರಾರ್ಥನೆ ಮಾಡಬೇಕು.

ಕರ್ಕ : ಹಾಲು ಮಿಶ್ರಿತ ನೀರನ್ನು ಶಿವನಿಗೆ ಅರ್ಪಿಸಬೇಕು. ಇದ್ರಿಂದ ಎಲ್ಲ ಬಯಕೆ ಈಡೇರುತ್ತದೆ.

ಸಿಂಹ : ಕೆಂಪು ಚಂದನದ ಜೊತೆ ನೀರನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ಜೊತೆಗೆ ಕಬ್ಬಿನ ಹಾಲನ್ನು ಶಿವನಿಗೆ ಅರ್ಪಿಸುವುದು ಶುಭಕರ.

ಕನ್ಯಾ : ಈ ರಾಶಿಯವರು ಬಾಂಗ್ ಹಾಗೂ ಉಮ್ಮತ್ತಿ ಹೂವನ್ನು ಅರ್ಪಿಸಬೇಕು. ಒತ್ತಡ ಕಡಿಮೆಯಾಗಿ ಜೀವನದಲ್ಲಿ ಸುಖ ಪ್ರಾಪ್ತಿಯಾಗುತ್ತದೆ.

ತುಲಾ : ಈ ರಾಶಿಯವರು ಆಕಳ ತುಪ್ಪ ಹಾಗೂ ಸುಗಂಧಿತ ಜಲದಿಂದ ಶಿವನ ಪೂಜೆ ಮಾಡಬೇಕು. ಕೇಸರಿಯುಕ್ತ ಸಿಹಿಯನ್ನು ಶಿವನಿಗೆ ನೀಡಬೇಕು.

ವೃಶ್ಚಿಕ : ಶಿವನ ಕೃಪೆಗೆ ಪಾತ್ರರಾಗ ಬಯಸುವವರು ಜೇನು ತುಪ್ಪದ ಜೊತೆ ನೀರು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ಜೇನುತುಪ್ಪವಿಲ್ಲದ ಸಂದರ್ಭದಲ್ಲಿ ಸಕ್ಕರೆಯನ್ನು ಬಳಸಬಹುದು.

ಧನು : ತುಪ್ಪದ ದೀಪ ಹಚ್ಚಿ, ಶಿವನಿಗೆ ಪೂಜೆ ಮಾಡಬೇಕು. ಪಂಚಾಕ್ಷರಿ ಮಂತ್ರವನ್ನು ಪಠಿಣಸಬೇಕು.

ಮಕರ : ಎಳ್ಳು ಹಾಗೂ ಜಲವನ್ನು ಶಿವನಿಗೆ ಅರ್ಪಿಸಬೇಕು. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ ಪೂಜೆ ಮಾಡಬೇಕು.

ಕುಂಭ : ತೆಂಗಿನ ಕಾಯಿಯ ನೀರನ್ನು ಶಿವನಿಗೆ ಅರ್ಪಿಸಿ ಪೂಜೆ ಮಾಡಬೇಕು.

ಮೀನ : ಮೀನ ರಾಶಿಯವರು ಶಿವನಿಗೆ ಚಂದನವನ್ನು ಅರ್ಪಿಸಬೇಕು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...