alex Certify ವೈದ್ಯನ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್; ನಾಲ್ವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯನ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್; ನಾಲ್ವರು ಅರೆಸ್ಟ್

ಬೆಂಗಳೂರು: ಬೆಂಗಳೂರಿನ ವೈದ್ಯ ವಿಕಾಸ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ವಿಕಾಸ್ ಪ್ರೇಯಸಿಯನ್ನು ಬಂಧಿಸಿದ ಪೊಲೀಸರಿಗೆ ಹತ್ಯೆಯ ಸತ್ಯ ಬಯಲಾಗಿದೆ.

ವೈದ್ಯ ವಿಕಾಸ್ ಪ್ರತಿಭಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆರಂಭದಲ್ಲಿ ವಿಕಾಸ್ ನನ್ನು ಪ್ರೀತಿಸಿದ್ದ ಪ್ರತಿಭಾ ಕಾಲಕ್ರಮೇಣ ಆತನನ್ನು ಬಿಟ್ಟು ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಇದರಿಂದ ವೈದ್ಯ ವಿಕಾಸ್ ಸಾಕಷ್ಟು ಬಾರಿ ಬುದ್ಧಿ ಹೇಳಿದ್ದ ಎನ್ನಲಾಗಿದೆ. ಆದರೂ ಪ್ರತಿಭಾ ವಿಕಾಸ್ ನನ್ನು ಬಿಟ್ಟು ಬೇರೆ ಯುವಕನ ಹಿಂದೆ ಹೋಗಿದ್ದಳು. ಇದೇ ಕೋಪದಲ್ಲಿ ವೈದ್ಯ ಪ್ರತಿಭಾ ತನ್ನೊಂದಿಗಿದ್ದ ಖಾಸಗಿ ಫೋಟೋ, ವಿಡಿಯೋಗಳನ್ನು ಹರಿಬಿಟ್ಟಿದ್ದ.

ವೈದ್ಯನ ಕೃತ್ಯದಿಂದ ಬೇಸತ್ತ ಪ್ರತಿಭಾ, ವಿಕಾಸ್ ನನ್ನು ಕೊಲೆ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಳು. ಇದೇ ಕಾರಣಕ್ಕೆ ವೈದ್ಯ ವಿಕಾಸ್ ನನ್ನು ಅಪಹರಿಸಿ ಮನೆಯಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ. ಪ್ರತಿಭಾಳ ಕೃತ್ಯಕ್ಕೆ ಆಕೆ ಪ್ರಿಯತಮ ಹಾಗೂ ಇನ್ನಿತರರು ಸಾಥ್ ನೀಡಿದ್ದರು. ಮಾರಣಾಂತಿಕವಾಗಿ ಹಲ್ಲೆಗೊಳಗಾದ ವಿಕಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಇದೀಗ ಪ್ರತಿಭಾ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...