alex Certify ವೃದ್ಧನ ಮದುವೆಯಾಗಲು ಒಪ್ಪಿ, ತಾಳಿ, ಕಾಲುಂಗುರದ ಜೊತೆ ಪರಾರಿಯಾದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧನ ಮದುವೆಯಾಗಲು ಒಪ್ಪಿ, ತಾಳಿ, ಕಾಲುಂಗುರದ ಜೊತೆ ಪರಾರಿಯಾದ ಮಹಿಳೆ

ಶಿವಮೊಗ್ಗ : ವೃದ್ಧ ವ್ಯಕ್ತಿಗೆ ಪತ್ನಿ ತೀರಿಕೊಂಡ ನಂತರ ಮತ್ತೊಂದು ಮದುವೆಯಾಗಬೇಕೆಂಬ ಬಯಕೆಯಾಗಿದೆ. ಇದಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ಹುಡುಕಾಟ ನಡೆಸಿದ್ದಾನೆ. ಈ ವ್ಯಕ್ತಿಗೆ 60 ವರ್ಷವಾಗಿದ್ದು ತಿಳಿದರೂ ಮಹಿಳೆಯೊಬ್ಬರು ಈತನ ಕೈ ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿಯೇ ಹಿಗ್ಗಿನಲ್ಲಿದ್ದ ವೃದ್ಧ, ಚಿನ್ನದ ತಾಳಿ, ಕಾಲುಂಗುರ ಸೇರಿದಂತೆ ಮದುವೆಯ ಅಗತ್ಯ ವಸ್ತುಗಳನ್ನು ಖರೀದಿಸಿ ತಂದಿದ್ದಾನೆ. ಮಧುಮಗಳು ಮಾತ್ರ ಅವುಗಳನ್ನು ಧರಿಸದೆ, ಅವುಗಳೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ಜಿಲ್ಲೆಯ ಹೊಳೆಹೊನ್ನೂರಿನ ನಂಜುಂಡಪ್ಪ ಎಂಬ ವ್ಯಕ್ತಿಯೇ ಮದುವೆಯ ವಿಷಯದಲ್ಲಿ ಮೋಸ ಹೋದ ವೃದ್ಧ. ಈತನಿಗೆ ಆದಾಗಲೇ ಮದುವೆಯಾಗಿ 30 ವರ್ಷಗಳೇ ಕಳೆದಿದ್ದವು. ಮೂವರು ಮಕ್ಕಳಿದ್ದಾರೆ. ಇತ್ತೀಚೆಗೆ ಪತ್ನಿ ತೀರಿಕೊಂಡಿದ್ದರು. ಒಂಟಿತನ ತಾಳಲಾರದೆ ಮತ್ತೊಂದು ಮದುವೆಗೆ ಪ್ರಯತ್ನಿಸುತ್ತಿದ್ದ.

ಜನ್ಮ ನೀಡಿದ ತಂದೆಯಿಂದಲೇ ಮಕ್ಕಳ ಹತ್ಯೆಗೆ ಯತ್ನ….!

ಈ ಸಂದರ್ಭದಲ್ಲಿಯೇ ಚಂದ್ರಿಕಾ ಎಂಬ ಮಹಿಳೆ ಮದುವೆಯಾಗುವುದಾಗಿ ಹೇಳಿದ್ದಾಳೆ. ಇಬ್ಬರೂ ನ. 15ರಂದು ಸಿಂಗದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ದೇವಸ್ಥಾನದವರು ಮದುವೆಗೆ ಅನುಮತಿ ನೀಡಿಲ್ಲ. ಹೀಗಾಗಿ ಶಿವಮೊಗ್ಗದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಮದುವೆಗಾಗಿ ವೃದ್ಧ ವರ, ಚಿನ್ನದ ತಾಳಿ, ಬೆಳ್ಳಿಯ ಚೈನ್, ಬಳೆ, ಕಾಲುಂಗುರ ಹಾಗೂ ರೇಷ್ಮೆ ಸೀರೆ ತಂದಿದ್ದ.

ಇವುಗಳು ಕೈಗೆ ಸೇರುವುದೇ ತಡ ಹೊಟೇಲ್ ನಲ್ಲಿ ತಿಂಡಿ ತಿಂದು ಬರುವುದಾಗಿ ಹೇಳಿ ಮಹಿಳೆ ಪರಾರಿಯಾಗಿದ್ದಾಳೆ. ಮೋಸ ಹೋಗಿದ್ದು ಗೊತ್ತಾದ ಕೂಡಲೇ ವೃದ್ಧ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...