alex Certify ವಿವಿಯಿಂದ ವಿದ್ಯಾರ್ಥಿ ನಾಪತ್ತೆ ಪೊಲೀಸರಿಗೆ ದೂರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಿಯಿಂದ ವಿದ್ಯಾರ್ಥಿ ನಾಪತ್ತೆ ಪೊಲೀಸರಿಗೆ ದೂರು….!

ಧಾರವಾಡ- ಧಾರವಾಡ ಕರ್ನಾಟಕ ವಿವಿಯಲ್ಲಿ ಸಂಶೋಧನಾ ಉಗಾಂಡ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ. ಜಿಯೋಲ್ ಎಂಬ ಉಗಾಂಡಾ ವಿದ್ಯಾರ್ಥಿಯೊಬ್ಬ ನಾಪತ್ತೆಯಾದವನು. ಈ ಸಂಬಂಧ ಇದೀಗ ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ. ಇವನ ಪೋಷಕರು ಕೂಡ ಈತನನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದಾರೆ.

ಹೌದು, ಜಿಯೋಲ್ ಕರ್ನಾಟಕ‌ ವಿವಿಯಲ್ಲಿ ಓದುತ್ತಿದ್ದವನು. ತತ್ವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಈತ ಕಳೆದ ಒಂದು ವರ್ಷದಿಂದ ಕಾಣಿಸಿಲ್ಲ. ಮತ್ತೊಂದು ವಿಚಾರ ಅಂದರೆ ಕಳೆದ ವರ್ಷವೇ ಈ‌ ವಿದ್ಯಾರ್ಥಿಯ ವಿಸಾ‌ ಕೂಡಾ ಮುಗಿದಿತ್ತು ಎಂದು ಹೇಳಲಾಗಿದೆ. ಕರ್ನಾಟಕ ವಿವಿ ಕ್ಯಾಂಪಸ್ ನಲ್ಲಿರುವ ಭೀಮಾ ಹಾಸ್ಟೆಲ್ ನಲ್ಲಿ ಉಗಾಂಡಾ‌ ವಿದ್ಯಾರ್ಥಿ ಉಳಿದುಕೊಂಡಿದ್ದ. ಕಳೆದ‌ ಅಕ್ಟೋಬರ್ ನಿಂದ ಹಾಸ್ಟೆಲ್ ತೊರೆದು ಹೋಗಿದ್ದಾನೆ ಎನ್ನಲಾಗಿದೆ.

ಈ‌ ಹಿನ್ನೆಲೆ ನಾಪತ್ತೆಯಾದ ಉಗಾಂಡಾ ವಿದ್ಯಾರ್ಥಿ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ ಕರ್ನಾಟಕ ವಿವಿ. ಕುಲಸಚಿವ ಯಶಪಾಲ್ ಕ್ಷಿರಸಾಗರ ಅವರು ಪೊಲೀಸ್ ಆಯುಕ್ತ ಲಾಬುರಾಮ್ ಗೆ ದೂರು ನೀಡಿದ್ದಾರೆ. ಜೊತೆಗೆ ಈ ಬಗ್ಗೆ ಉಗಾಂಡಾ ಹೈ ಕಮಿಷನಗೆ ಕೂಡಾ ಪತ್ರ ಬರೆದಿದ್ದಾರೆ ಕರ್ನಾಟಕ ವಿವಿ ಕುಲಪತಿ. ಈತ ಯಾರಿಗೂ ಹೇಳದೇ ಕಾಣೆಯಾಗಿರೋದು ಹಲವು ಅನುಮಾನದ ಜೊತೆಗೆ ವಿವಿಗೆ ತಲೆನೋವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...