alex Certify ವಿಪಕ್ಷದವರು ‘ನಿರುದ್ಯೋಗಿ’ಗಳು ಎನ್ನುತ್ತಾ ಪಕೋಡಾ ಕರಿದ ಬಿಜೆಪಿ ಶಾಸಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಪಕ್ಷದವರು ‘ನಿರುದ್ಯೋಗಿ’ಗಳು ಎನ್ನುತ್ತಾ ಪಕೋಡಾ ಕರಿದ ಬಿಜೆಪಿ ಶಾಸಕ..!

ವಿರೋಧ ಪಕ್ಷಗಳು ಪದೇ ಪದೇ ಟೀಕಿಸುತ್ತಿರುವ ನಿರುದ್ಯೋಗತನದ ಸವಾಲನ್ನು ಈ ಬಾರಿಯ ಚುನಾವಣೆಯ ಸಮಯದ ಬಳಿಕ ಮೋದಿ ಸರ್ಕಾರವು ಗೆದ್ದು ತೋರಿಸುತ್ತದೆ ಎಂದು ಬಿಜೆಪಿಯ ಅಲಹಾಬಾದ್​ ದಕ್ಷಿಣದ ಅಭ್ಯರ್ಥಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಈ ಮಾತನ್ನು ಹೇಳಿದ್ದಾರೆ.

ಈ ಹಿಂದೆ ಅಲಹಾಬಾದ್​ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್​ ರಾಜ್​ನಲ್ಲಿ ರೌಂಡ್ಸ್​ ಹಾಕಿದ ಸಿದ್ಧಾರ್ಥ್ ನಾಥ್​ ಸಿಂಗ್​ ಸ್ಥಳೀಯ ಮಾರುಕಟ್ಟೆಗಳಲ್ಲಿ ಓಡಾಡಿ ಚಹಾ ಹಾಗೂ ಪಕೋಡಗಳನ್ನು ಮಾರಾಟ ಮಾಡುವವರನ್ನು ಹುರಿದುಂಬಿಸಿದ್ದಾರೆ. ಸಿದ್ಧಾರ್ಥ್​ ನಾಥ್​ ಸಿಂಗ್​​​ಗೆ ಬೆಂಬಲಿಗರು ಸಹ ಸಾಥ್​ ನೀಡಿದ್ದಾರೆ. ಸಮಾಜವಾದಿ ಪಕ್ಷಕ್ಕೆ ಸೇರಿದವರು ನಿಜವಾದ ನಿರುದ್ಯೋಗಿಗಳು ಎಂದು ಸಿದ್ಧಾರ್ಥ್​ನಾಥ್​​ ಸಿಂಗ್​​ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಅಖಿಲೇಶ್​ ಯಾದವ್​​ ಕಾಲದಲ್ಲಿ ಪೂರ್ವಾಂಚಲ್​ ಎಕ್ಸ್​ಪ್ರೆಸ್​ವೇ ನಿರ್ಮಿಸುವಾಗ 15 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿತ್ತು. ಆದರೆ ನಾವು ಕೇವಲ 4500 ಕೋಟಿ ರೂಪಾಯಿ ಬಜೆಟ್​ನಲ್ಲಿ ವಿಶಾಲವಾದ ಹಾಗೂ ಗುಣಮಟ್ಟದ ಎಕ್ಸ್​ಪ್ರೆಸ್​ ವೇಯನ್ನು ನಿರ್ಮಿಸಿದ್ದೇನೆ. ಹಾಗಾದರೆ ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ಅಷ್ಟೆಲ್ಲ ಹಣ ಹೇಗೆ ಖರ್ಚಾಯಿತು..? ಆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನೆ ಮಾಡಿದ್ದಾರೆ.

ಕ್ಯಾಂಪೇನ್​ ವಿಡಿಯೋಗಳಲ್ಲಿ ಬಿಜೆಪಿ ಶಾಸಕ ನಂದ್​ಗೋಪಾಲ್​ ಗುಪ್ತಾ ಹಾಗೂ ಸಿದ್ಧಾರ್ಥ್​ ನಾಥ್​ ಸಿಂಗ್​​ ಪಕೋಡಾ, ಪುರಿ, ಜಿಲೇಬಿಗಳನ್ನು ಕರಿಯುವುದು ಹಾಗೂ ಚಹಾ ಮಾಡುವ ಮೂಲಕ ಪಕ್ಷದ ಪರ ಪ್ರಚಾರ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...