alex Certify ‘ಲಡ್ಡು’ ಜೊತೆ ಸಿಕ್ಕಿದ್ದ 2.91 ಲಕ್ಷ ರೂಪಾಯಿಗಳನ್ನು ಮರಳಿಸಿದ ಭಕ್ತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಡ್ಡು’ ಜೊತೆ ಸಿಕ್ಕಿದ್ದ 2.91 ಲಕ್ಷ ರೂಪಾಯಿಗಳನ್ನು ಮರಳಿಸಿದ ಭಕ್ತ….!

ಭೀಮನ ಅಮಾವಾಸ್ಯೆ ದಿನದಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಸ್ಥೆಯಲ್ಲಿ ಭಕ್ತರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಲಡ್ಡು ವಿತರಣಾ ಕೌಂಟರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರರೊಬ್ಬರು ಗಡಿಬಿಡಿಯಲ್ಲಿ ಬೆಂಗಳೂರು ಮೂಲದ ಭಕ್ತ ನರಸಿಂಹ ಎಂಬವರಿಗೆ ಲಾಡು ಪ್ರಸಾದದ ಜೊತೆಗೆ 2.91 ಲಕ್ಷ ಹಣವಿದ್ದ ಚೀಲವನ್ನೂ ಕೊಟ್ಟಿದ್ದರು.

ಬಳಿಕ ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಸಿಸಿ ಟಿವಿ ಪರಿಶೀಲಿಸಿದ ವೇಳೆ ದೇಗುಲದ ಸಿಬ್ಬಂದಿ ಮಾಡಿದ್ದ ಎಡವಟ್ಟು ತಿಳಿದು ಬಂದಿತ್ತು. ಹೀಗಾಗಿ ಆ ಸಿಬ್ಬಂದಿಯೇ ಹಣ ಪಾವತಿಸಲು ಅಧಿಕಾರಿಗಳು ತಾಕೀತು ಮಾಡಿದ್ದರು.

ಆಕಸ್ಮಿಕವಾಗಿ ಹಣದ ಚೀಲ ಪಡೆದುಕೊಂಡಿದ್ದ ನರಸಿಂಹ ಅವರು ಇದೀಗ ಅದನ್ನು ಮರಳಿಸಿದ್ದು, ಈ ಪ್ರಮಾದವೆಸಗಿದ್ದ ದೇಗುಲದ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...