alex Certify ಲಟ್ಟಣಿಗೆಯಿಂದ ಹಲ್ಲೆಗೈದು ತಂದೆಯನ್ನೇ ಕೊಲೆಗೈದ ಪಾಪಿ ಪುತ್ರ ಅಂದರ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಟ್ಟಣಿಗೆಯಿಂದ ಹಲ್ಲೆಗೈದು ತಂದೆಯನ್ನೇ ಕೊಲೆಗೈದ ಪಾಪಿ ಪುತ್ರ ಅಂದರ್​…..!

17 ವರ್ಷದ ಪುತ್ರ ತನ್ನ ತಂದೆಯನ್ನು ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ ಆಘಾತಕಾರಿ ಘಟನೆ ದೆಹಲಿಯ ಸರಾಯ್​​ ರೋಹಿಲ್ಲಾದಲ್ಲಿ ನಡೆದಿದೆ.

ಪಿಎಸ್​ ಸರೈ ರೋಹಿಲ್ಲಾ ಪೊಲೀಸರು ಆರೋಪಿ ಪುತ್ರನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದು ಆತನನ್ನು ಬಂಧಿಸಿದ್ದಾರೆ.

ಆಗಸ್ಟ್​ 22ರಂದು ಈ ಘಟನೆ ಸಂಭವಿಸಿದ್ದು ರೈಲ್ವೆ ರಕ್ಷಣಾ ವಿಶೇಷ ಪಡೆಯ ಸಬ್​ ಇನ್​ಸ್ಪೆಕ್ಟರ್​ ಅಶೋಕ್​​​ ಬನ್ಸಿ ಲಾಲ್​ ಎಂಬ ವ್ಯಕ್ತಿಯನ್ನು ಪಹಾರ್​ ಗಂಜ್​​ನಲ್ಲಿರುವ ಉತ್ತರ ರೈಲ್ವೆ ಸೆಂಟ್ರಲ್​ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸುವ ಮೊದಲೇ ಬನ್ಸಿ ಲಾಲ್​ ಮೃತಪಟ್ಟಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಮೃತ ವ್ಯಕ್ತಿ ಪಕ್ಕೆಲುಬು ಸೇರಿದಂತೆ ವಿವಿಧೆಡೆ ಒಟ್ಟು 19 ಗಾಯಗಳನ್ನು ವೈದ್ಯರು ಗಮನಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ಬನ್ಸಿ ಲಾಲ್​ ಮೃತಪಟ್ಟ ದಿನದಂದು ಯಾವುದೋ ಕ್ಷುಲ್ಲಕ ಕಾರಣಕ್ಕೆ ತನ್ನ ಪುತ್ರನೊಂದಿಗೆ ಜಗಳವಾಡಿದ್ದರು ಎಂಬ ವಿಚಾರ ತಿಳಿದು ಬಂದಿದೆ.

ಈ ಜಗಳವು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪುತ್ರನು ತನ್ನ ತಂದೆಯ ಮೇಲೆ ಲಟ್ಟಣಿಗೆಯಿಂದ ದಾಳಿ ನಡೆಸಿದ್ದಾನೆ ಹಾಗೂ ಮಾರಣಾಂತಿಕ ಹಲ್ಲೆಯಿಂದಾಗಿ ಬನ್ಸಿ ಲಾಲ್​ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬನ್ಸಿಲಾಲ್​ನನ್ನು ಹತ್ಯೆ ಮಾಡಲು ಬಳಕೆ ಮಾಡಿದ ಲಟ್ಟಣಿಗೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...