alex Certify ಲಂಚದ ಆರೋಪ: ನಾಲ್ವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಚದ ಆರೋಪ: ನಾಲ್ವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು : ಪ್ರಕರಣ ಒಂದರಲ್ಲಿ ಹೆಸರು ಕೈ ಬಿಡಲು 15 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.

ಕೆಆರ್ ಪುರಂ ಇನ್ಸಪೆಕ್ಟರ್ ಅಂಬರೀಶ್, ಪಿ ಎಸ್ ಐ ರಂಜಿತ್ ಹಾಗೂ ಸಿಬ್ಬಂದಿಗಳಾದ ಸಿದ್ದು, ಸುರೇಶ್, ಮೂರ್ತಿ ಎಂಬುವವರ ಮೇಲೆ ಎಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಎಫ್ಐಆರ್ ಒಂದರಲ್ಲಿ ಹೆಸರು ಕೈ ಬಿಡುವುದಕ್ಕಾಗಿ 15 ಲಕ್ಷ ರೂ. ಬೇಡಿಕೆ ಇಡಲಾಗಿತ್ತು. ಮುಂಗಡವಾಗಿ 6 ಲಕ್ಷ ರೂ. ಹಣ ಹಾಗೂ ಒಂದು ಕಾರನ್ನು ಇನ್ಸ್ ಪೆಕ್ಟರ್ ಅಂಬರೀಶ್ ಪಡೆದಿದ್ದರು. ಇನ್ನುಳಿದ ರೂ. 4 ಲಕ್ಷಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಾನ್ ಮೋಸೆಸ್ ಎಂಬುವವರು ಎಸಿಬಿಗೆ ದೂರು ನೀಡಿದ್ದರು.

ಪೊಲೀಸರ ಕಿರುಕುಳ ತಾಳಲಾಗುತ್ತಿಲ್ಲ ಎಂದು ಎಸಿಬಿಗೆ ಜಾನ್ ಮೋಸೆಸ್ ದೂರು ಸಲ್ಲಿಸಿದ್ದರು. ದೂರುದಾರ ಜಾನ್ ಮೋಸೆಸ್ ವಿರುದ್ಧ ಈ ಹಿಂದೆ ಸಿಐಡಿ ಸೇರಿದಂತೆ ಹಲವು ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...