alex Certify ರೈತರಿಗೆ ಬಿಗ್ ಶಾಕ್: ಇದೇ ಮೊದಲ ಬಾರಿಗೆ ಎಳನೀರು ಬೆಲೆಯಲ್ಲಿ ಭಾರೀ ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಬಿಗ್ ಶಾಕ್: ಇದೇ ಮೊದಲ ಬಾರಿಗೆ ಎಳನೀರು ಬೆಲೆಯಲ್ಲಿ ಭಾರೀ ಕುಸಿತ

ಚಳಿಗಾಲದಲ್ಲಿ ಎಳನೀರಿಗೆ ಬೇಡಿಕೆ ಸ್ವಲ್ಪ ಕಡಿಮೆ ಇರುತ್ತದೆ. ಅದರಲ್ಲೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳಿ ಮತ್ತು ಮಳೆ ಹೆಚ್ಚಾಗಿರುವುದರಿಂದ ಇದರ ಪರಿಣಾಮ ಏಷ್ಯಾದ ಅತಿದೊಡ್ಡ ಎಳನೀರು ಮಾರುಕಟ್ಟೆ ಎಂಬ ಕೀರ್ತಿಗೆ ಪಾತ್ರವಾಗಿರುವ ಮದ್ದೂರು ಮಾರುಕಟ್ಟೆಯ ಮೇಲೆ ಬೀರಿದೆ.

ಹೌದು, ಮದ್ದೂರು ಮಾರುಕಟ್ಟೆಯ ಒಟ್ಟು ವಹಿವಾಟಿನ ಶೇಕಡ 90ರಷ್ಟು ಎಳನೀರು ದೆಹಲಿಗೆ ರವಾನೆಯಾಗುತ್ತಿದ್ದು, ಅಲ್ಲಿ ಚಳಿ ಮತ್ತು ಮಳೆ ಇರುವ ಕಾರಣ ಬೇಡಿಕೆ ಕುಸಿದಿದೆ. ಇದರಿಂದಾಗಿ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಳನೀರು ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, 20 ರೂಪಾಯಿಗಳಷ್ಟು ಕಡಿಮೆಯಾಗಿದೆ.

ಮೊಟ್ಟೆ ಯೋಜನೆಯಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ; ಯೋಜನೆ ಹಿಂಪಡೆಯುವಂತೆ ಹಲವು ಸಮುದಾಯಗಳ ಆಗ್ರಹ

ತಿಂಗಳ ಹಿಂದೆ 36 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಎಳನೀರು ಕೆಲದಿನಗಳಿಂದ ಕೇವಲ 14 – 15 ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಎಳನೀರು ತಂದ ರೈತರು ಕಂಗಾಲಾಗಿದ್ದಾರೆ. ಎಳನೀರು ಕೊಯ್ದ ಖರ್ಚು ಸಹ ಗಿಟ್ಟುತ್ತಿಲ್ಲ ಎಂಬುದು ರೈತರ ಅಳಲಾಗಿದೆ. ಎಳನೀರಿನ ಬೆಲೆಯಲ್ಲಿ ಇಷ್ಟು ಕಡಿಮೆಯಾದರೂ ಸಹ ರಾಜ್ಯದಲ್ಲಿ ಮಾತ್ರ ಇದರ ಪ್ರಯೋಜನ ಗ್ರಾಹಕರಿಗೆ ಸಿಗುತ್ತಿಲ್ಲ. ರಾಜ್ಯದಲ್ಲಿ ಈಗಲೂ 30ರಿಂದ 35 ರೂಪಾಯಿಗೆ ಎಳನೀರು ಸಾರ್ವಜನಿಕರಿಗೆ ಮಾರಾಟವಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...