alex Certify ‘ರಿತೇಶ್​ ನನ್ನನ್ನು ಬಳಸಿಕೊಂಡಿದ್ದಾನೆ’ : ಪತಿಯಿಂದ ಬೇರ್ಪಟ್ಟ ವಿಚಾರ ನೆನೆದು ಕಣ್ಣೀರಿಟ್ಟ ರಾಖಿ ಸಾವಂತ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಿತೇಶ್​ ನನ್ನನ್ನು ಬಳಸಿಕೊಂಡಿದ್ದಾನೆ’ : ಪತಿಯಿಂದ ಬೇರ್ಪಟ್ಟ ವಿಚಾರ ನೆನೆದು ಕಣ್ಣೀರಿಟ್ಟ ರಾಖಿ ಸಾವಂತ್​

ಬಿಗ್​ಬಾಸ್​ ಸ್ಪರ್ಧಿ ರಾಖಿ ಸಾವಂತ್​ ಕೆಲ ದಿನಗಳ ಹಿಂದಷ್ಟೇ ತಾವು ತಮ್ಮ ಪತಿ ರಿತೇಶ್​ನಿಂದ ದೂರವಾಗುತ್ತಿರುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿದ್ದರು.

ಬಿಗ್​ ಬಾಸ್​ ಸೀಸನ್​ 14ರಲ್ಲಿ ತಮ್ಮ ಪತಿಯ ಬಗ್ಗೆ ಹೇಳಿಕೊಂಡಿದ್ದ ನಟಿ ರಾಖಿ ಸಾವಂತ್, ಬಿಗ್​ ಬಾಸ್​ ಸೀಸನ್​ 15ರಲ್ಲಿ ಅವರನ್ನು ಕರೆದುಕೊಂಡು ಬಂದಿದ್ದರು.

ದಂಪತಿಯು ಯಾವಾಗಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಶೋನಲ್ಲಿ ಇವರ ನಡುವೆ ಸಾಕಷ್ಟು ಕಾರಣಗಳಿಗೆ ಜಗಳ ಕೂಡ ಆಗುತ್ತಿತ್ತು.

ಇತ್ತೀಚಿನ ಸಂದರ್ಶನವೊಂದರಲ್ಲಿ ರಿತೇಶ್​ ನನ್ನಿಂದ ಬೇರ್ಪಟ್ಟಿದ್ದರಿಂದ ನನಗೆ ತುಂಬಾನೇ ನೋವಾಗಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.

ರಾಖಿ ಸಾವಂತ್​ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಪತಿ ರಿತೇಶ್​ ತಮ್ಮನ್ನು ತೊರೆದಿದ್ದಾರೆ ಎಂದು ಹೇಳುವಾಗಲೇ ಸಾಕಷ್ಟು ಭಾವುಕರಾಗಿದ್ದರು.

ಬಿಗ್​ಬಾಸ್​ ಮನೆಯಿಂದ ಹೊರಬರುತ್ತಿದ್ದಂತೆಯೇ ಆತನ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗಿತ್ತು. ಆತ ನನ್ನೊಂದಿಗೆ ಅತಿಯಾಗಿ ಜಗಳವಾಡುತ್ತಿದ್ದ. ಆತ ನೀನು ನನ್ನನ್ನು ಬಳಕೆ ಮಾಡಿಕೊಂಡಿದ್ದೀಯಾ ಎಂದು ಹೇಳಿದ್ದಾನೆ. ಆದರೆ ವಾಸ್ತವದಲ್ಲಿ ಆತ ನನ್ನನ್ನು ಬಳಕೆ ಮಾಡಿಕೊಂಡಿದ್ದಾನೆ. ತನಗೆ ಪ್ರಚಾರ ಸಿಗಬೇಕು ಎಂದು ರಿತೇಶ್​ ನನ್ನ ಜೊತೆ ವಿವಾಹ ಮಾಡಿಕೊಂಡಿದ್ದ ಎಂದು ರಾಖಿ ಹೇಳಿದ್ದಾರೆ.

ಪತಿಯಿಂದ ಬೇರ್ಪಟ್ಟ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಪೋಸ್ಟ್​ ಶೇರ್​ ಮಾಡಿದ್ದ ರಾಖಿ ಸಾವಂತ್​, ನನ್ನೆಲ್ಲ ಅಭಿಮಾನಿಗಳು ಹಾಗೂ ಹಿತೈಷಿಗಳೇ, ನಾನು ಹಾಗೂ ರಿತೇಶ್​ ಬೇರ್ಪಟ್ಟಿದ್ದೇವೆ ಎಂದು ನಿಮಗೆ ಹೇಳಬಯಸುತ್ತೇನೆ. ಬಿಗ್​ ಬಾಸ್​ ಶೋ ಬಳಿಕ ನಮ್ಮ ನಡುವೆ ಸಾಕಷ್ಟು ವಿಚಾರಗಳು ಸಂಭವಿಸಿದವು. ನನ್ನ ನಿಯಂತ್ರಣದಲ್ಲಿ ಇರದ ಕೆಲವು ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ನಾವು ನಮ್ಮ ಭಿನ್ನಾಭಿಪ್ರಾಯಗಳು ಪರಿಹರಿಸಲು ಪ್ರಯತ್ನಿಸಿದ್ದೇವೆ. ಆದರೆ ನಾವು ಪ್ರತ್ಯೇಕವಾಗಿ ಜೀವನವನ್ನು ಹೆಚ್ಚು ಆನಂದಿಸುವುದೇ ಉತ್ತಮ ಎಂದು ನಾನು ಭಾವಿಸುತ್ತೇನೆ ಎಂದು ಪೋಸ್ಟ್​ ಶೇರ್ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...