ಎಸ್.ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಈಗಾಗಲೇ 900 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದ ಐದನೇ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ್ ರಾಜು ಹಾಗೂ ಜ್ಯೂನಿಯರ್ ಎನ್ಟಿಆರ್ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಕೊಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ಚಿರಂಜೀವಿ ಪುತ್ರ, ರಾಮ್ ಚರಣ್ ಭಾನುವಾರ ಮುಂವೈ ಏರ್ಪೋರ್ಟ್ಗೆ ಬರಿಗಾಲಿನಲ್ಲಿ ಬಂದಿಳಿದಿದ್ದಾರೆ. ರಾಮ್ಚರಣ್ 41 ದಿನಗಳ ಅಯ್ಯಪ್ಪ ದೀಕ್ಷೆಯ ಸುದೀರ್ಘ ಆಚರಣೆಯಲ್ಲಿದ್ದಾರೆ. ವಿಮಾನ ನಿಲ್ದಾಣ ಹಾಗೂ ಮುಂಬೈನ ಸಿನಿಮಾ ಥಿಯೇಟರ್ನಲ್ಲಿ ಕಪ್ಪು ಬಣ್ಣದ ಕುರ್ತಾ ಪೈಜಾಮಾದಲ್ಲಿ ಕಾಣಿಸಿದ್ದಾರೆ.
ಮುಂಬೈನ ಸಿಂಗಲ್ ಸ್ಕ್ರೀನ್ ಥಿಯೇಟರ್ಗೆ ಆಗಮಿಸಿದ ರಾಮ್ಚರಣ್ರನ್ನು ಅಭಿಮಾನಿಗಳು ಮುತ್ತಿದ್ದಾರೆ. ಈ ಘಟನೆಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.