alex Certify ರಾಜ್ಯ ಸರ್ಕಾರದ ವಿರುದ್ಧ ‘ಕಾಂಗ್ರೆಸ್​’ ಆರ್ಭಟ: ಟ್ರ್ಯಾಕ್ಟರ್​ ಮೂಲಕವೇ ಸುವರ್ಣ ಸೌಧ ಪ್ರವೇಶ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದ ವಿರುದ್ಧ ‘ಕಾಂಗ್ರೆಸ್​’ ಆರ್ಭಟ: ಟ್ರ್ಯಾಕ್ಟರ್​ ಮೂಲಕವೇ ಸುವರ್ಣ ಸೌಧ ಪ್ರವೇಶ…..!

ಸಿಎಂ ಬಸವರಾಜ ಬೊಮ್ಮಾಯಿ ಸುವರ್ಣ ಸೌಧದಲ್ಲಿ ತಮ್ಮ ಮೊದಲ ಅಧಿವೇಶನಕ್ಕೆ ಸಜ್ಜಾಗಿದ್ದರೆ ಕಾಂಗ್ರೆಸ್​ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್​ ನಾಯಕರು ಪ್ರತಿಭಟನಾ ರ್ಯಾಲಿ ನಡೆಸಿದರು.

ಟ್ರ್ಯಾಕ್ಟರ್​ ಮೂಲಕ ಸುವರ್ಣ ಸೌಧ ಪ್ರವೇಶಕ್ಕೆ ಮುಂದಾದ ಕಾಂಗ್ರೆಸ್​ ನಾಯಕರಿಗೆ ಪೊಲೀಸರು ಬ್ಯಾರಿಕೇಡ್​ ಹಾಕಿ ತಡೆ ನೀಡಿದರು. ಆದರೂ ಯಾವುದೇ ಕಾರಣಕ್ಕೂ ಪಟ್ಟು ಬಿಡದ ಕಾಂಗ್ರೆಸ್​ ನಾಯಕರು ಟ್ರ್ಯಾಕ್ಟರ್​ ಮೂಲಕವೇ ಸುವರ್ಣ ಸೌಧ ಪ್ರವೇಶಿಸಿದ್ದಾರೆ.

ಬ್ಯಾರಿಕೇಡ್​ ತಳ್ಳಲು ಮುಂದಾದ ಕಾಂಗ್ರೆಸ್​ ನಾಯಕರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಾವು ಸದನ ಒಳಗೂ ಹೋರಾಡುತ್ತೇವೆ, ಹೊರಗೂ ಹೋರಾಡುತ್ತೇವೆ. ಜನರಿಗಾಗಿ ನಮ್ಮ ಹೋರಾಟ ಎಂದಿಗೂ ಇರಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಸ್ಪೀಕರ್​ ವಿಶ್ವೇಶ್ವರಯ್ಯ ಕಾಗೇರಿಗೆ ಕರೆ ಮಾಡಿ ಸುರ್ವಣ ಸೌಧ ಪ್ರವೇಶಕ್ಕೆ ಅನುಮತಿ ಕೇಳಿದ್ದಾರೆ. ಟ್ರ್ಯಾಕ್ಟರ್​ ಮೂಲಕವೇ ಸುವರ್ಣ ಸೌಧ ಪ್ರವೇಶಿಸಲು ಕಾಗೇರಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರು ಟ್ರ್ಯಾಕ್ಟರ್​ ನಾಯಕರು ಬರೋಬ್ಬರಿ ಒಂದೂವರೆ ಗಂಟೆಗಳ ಹೈಡ್ರಾಮಾದ ಬಳಿಕ ಸುವರ್ಣ ಸೌಧ ಪ್ರವೇಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...