alex Certify ರಾಜ್ಯದಲ್ಲಿ ಓಮಿಕ್ರಾನ್​ ಆತಂಕ: ಸೋಂಕಿತನ ಟ್ರಾವೆಲ್​ ಹಿಸ್ಟರಿಯೇ ಭಯಾನಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಓಮಿಕ್ರಾನ್​ ಆತಂಕ: ಸೋಂಕಿತನ ಟ್ರಾವೆಲ್​ ಹಿಸ್ಟರಿಯೇ ಭಯಾನಕ..!

ರಾಜ್ಯದಲ್ಲಿ ಓಮಿಕ್ರಾನ್​ ವೈರಸ್​​ ಪತ್ತೆ ಹಿನ್ನೆಲೆಯಲ್ಲಿ ಆತಂಕ ದ್ವಿಗುಣಗೊಂಡಿದೆ. ಸೋಂಕಿತ ವ್ಯಕ್ತಿಯ ಟ್ರಾವೆಲ್​ ಹಿಸ್ಟರಿ ಕಲೆ ಹಾಕಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಸೋಂಕಿತನ ಟ್ರಾವೆಲ್​ ಹಿಸ್ಟರಿಯೇ ಬೆಚ್ಚಿ ಬೀಳಿಸುವಂತಿದೆ.

ಕಳೆದ ತಿಂಗಳ 20ನೇ ತಾರೀಖಿನಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ಏರ್​ಪೋರ್ಟ್​ಗೆ ಬಂದಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್​ ಸೋಂಕು ಕಾಣಿಸಿಕೊಂಡಿದೆ. ಹೋಟೆಲ್​ನಲ್ಲಿ ಮೂರು ದಿನಗಳ ಕಾಲ ಈ ವಿದೇಶಿ ಪ್ರಜೆ ಕ್ವಾರಂಟೈನ್​ನಲ್ಲಿದ್ದರು ಎನ್ನಲಾಗಿದೆ. ಮೂರು ದಿನಗಳ ಬಳಿಕ ಖಾಸಗಿ ಕ್ಲಿನಿಕ್​ ಒಂದಲ್ಲಿ ಕೋವಿಡ್​ ಪರೀಕ್ಷೆ ನಡೆಸಲಾಗಿತ್ತು.

ಕೋವಿಡ್​ ರಿಪೋರ್ಟ್​ನಲ್ಲಿ ನೆಗೆಟಿವ್​ ಎಂದು ವರದಿ ಬಂದಿದೆ. ಬಳಿಕ ನವೆಂಬರ್​ 23ರಂದು ಬೊಮ್ಮಸಂದ್ರದ ಅಡಕಾರ್​ ಇಂಗ್ರಾಮ್​ ಲಿಮಿಟೆಡ್​ ಕಂಪನಿಗೆ ಸೋಂಕಿತ ಭೇಟಿ ನೀಡಿದ್ದಾರೆ. ಕಂಪನಿಯೇ ಕಳುಹಿಸಿದ್ದ ಕ್ಯಾಬ್​ ಮೂಲಕ ಹೋಟೆಲ್​ನಿಂದ ಕಂಪನಿಗೆ ಆಗಮಿಸಿದ್ದರು. ಕಂಪನಿಯ ಬೋರ್ಡ್ ಮೀಟಿಂಗ್​ನಲ್ಲಿಯೂ ಭಾಗಿಯಾಗಿದ್ದರು.

ಇದಾದ ಬಳಿಕ ಬೇರೊಂದು ಕ್ಯಾಬ್​ ಮೂಲಕ ಬೆಂಗಳೂರಿನ ಹೋಟೆಲ್​​ ಕರೆ ತೆರಳಿದ್ದರು. ಇದಾದ ಬಳಿಕ ಮತ್ತೊಮ್ಮೆ ಕೋವಿಡ್​ ಪರೀಕ್ಷೆ ಮಾಡಿಸಿಕೊಂಡಿದ್ದರು.ಈ ವರದಿಯಲ್ಲಿ ಸೋಂಕು ಪಾಸಿಟಿವ್​ ಎಂದು ಬಂದಿದೆ. ಕೋವಿಡ್​ ವೈರಸ್​ ಪರೀಕ್ಷಾ ವರದಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.

ಸೌತ್​ ಆಫ್ರಿಕಾ ಪ್ರಜೆಯಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆಯೇ ಕಂಪನಿಯ 60 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವವರನ್ನೂ ಆರೋಗ್ಯ ಇಲಾಖೆ ತಪಾಸಣೆ ಮಾಡುತ್ತಿದೆ. ಆದರೆ ಎಲ್ಲ ವರದಿ ನೆಗೆಟಿವ್​ ಬಂದಿದ್ದು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿದ್ದ ಆತಂಕ ದೂರಾಗಿದೆ.

ದಕ್ಷಿಣ ಆಫ್ರಿಕಾ ಪ್ರಜೆಯ ಲ್ಯಾಬ್​ ರಿಪೋರ್ಟ್​ನಲ್ಲಿ ಓಮಿಕ್ರಾನ್​ ರೂಪಾಂತರಿ ಇರುವುದು ದೃಢಪಟ್ಟಿದೆ. ಇದರಿಂದ ರಾಜ್ಯದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್​ನಲ್ಲಿ ಇರಿಸಿದೆ. ಸದ್ಯ ಕ್ಯಾಬ್​ ಚಾಲಕನನ್ನು ಹುಡುಕುವ ಕೆಲಸ ಮಾಡಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...