alex Certify ರಸ್ತೆ ಗುಂಡಿಗೆ ಯುವಕ ಬಲಿ ಪ್ರಕರಣ; 20X30 ಸೈಟ್ ಪರಿಹಾರವಾಗಿ ಘೋಷಿಸಿದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಗುಂಡಿಗೆ ಯುವಕ ಬಲಿ ಪ್ರಕರಣ; 20X30 ಸೈಟ್ ಪರಿಹಾರವಾಗಿ ಘೋಷಿಸಿದ ಶಾಸಕ

ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಯುವಕ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಯುವಕನ ಕುಟುಂಬಕ್ಕೆ ಉಚಿತ ನಿವೇಶನ ಪರಿಹಾರವಾಗಿ ಘೋಷಿಸಿದ್ದಾರೆ.

ಯಲಹಂಕದ ಮುನೇಶ್ವರ ಲೇಔಟ್ ನ ರಸ್ತೆ ಗುಂಡಿಗೆ ಬಿದ್ದು 27 ವರ್ಷದ ಯುವಕ ಅಶ್ವಿನ್ ಸಾವನ್ನಪ್ಪಿದ್ದರು. ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ಎಸ್.ಆರ್.ವಿಶ್ವನಾಥ್ ಯುವಕನ ಕುಟುಂಬಕ್ಕೆ ಸರ್ಕಾರದಿಂದ ನಿವೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಶಾಸಕನಾಗಿ 20X30 ಅಳತೆಯ ಸೈಟ್ ನ್ನು ಅಶ್ವಿನ್ ಕುಟುಂಬಕ್ಕೆ ಉಚಿತವಾಗಿ ನೀಡುತ್ತೇನೆ. ಅಲ್ಲದೇ ಮನೆ ಕೂಡ ಕಟ್ಟಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...