alex Certify ಮೀನು ಹಿಡಿಯಲು ಶುರುವಾದ ಜಗಳ ಸಹೋದರರ ಕೊಲೆಯಲ್ಲಿ ಅಂತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿಯಲು ಶುರುವಾದ ಜಗಳ ಸಹೋದರರ ಕೊಲೆಯಲ್ಲಿ ಅಂತ್ಯ

ಮೀನುಗಾರಿಕೆ ವಿಚಾರವಾಗಿ ಉಂಟಾದ ವಿವಾದದಲ್ಲಿ ಇಬ್ಬರು ಸಹೋದರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯು ಬಿಹಾರದ ಮುಜಾಫರ್​ ನಗರದಲ್ಲಿ ನಡೆದಿದೆ.

ಮೃತರನ್ನು ಸಾಹೇಬ್​ಗಂಜ್​ ಪೊಲೀಸ್​ ಠಾಣೆ ವ್ಯಾಪ್ತಿಯ ಬರಿಯಾ ಗ್ರಾಮದ ಪ್ರಾಥಮಿಕ ಕೃಷಿ ಸಾಲ ಸಂಘಗಳ ಅಧ್ಯಕ್ಷ ರಾಜೇಶ್​ ಸಹಾನಿ ಅಲಿಯಾಸ್​ ಭೋಲಾ ಮತ್ತು ಸಹೋದರ ಮುಕೇಶ್​ ಸಹಾನಿ ಎಂದು ಗುರುತಿಸಲಾಗಿದೆ.

ಈ ಹತ್ಯೆಯ ಬಳಿಕ ಘಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಅಧಿಕಾರಿಗಳು ಭದ್ರತಾ ಪಡೆಯನ್ನು ನಿಯೋಜಿಸಿದ್ದಾರೆ.

ಮೀನುಗಾರಿಕೆ ವಿವಾದದಲ್ಲಿ ಇಬ್ಬರು ಸಹೋದರರ ಕೊಲೆಯಾಗಿದೆ ಎಂದು ಸಾಹೇಬ್​ಗಂಜ್​ ಪೊಲೀಸ್​ ಠಾಣೆಯ ಎಎಸ್​ಐ ಬ್ರಜ್​ ಭೂಷಣ್​ ಸಿಂಗ್​ ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಮೀನುಗಾರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಇದೇ ಜಗಳವು ವಿಕೋಪಕ್ಕೆ ತಿರುಗಿದೆ. ಮುಕೇಶ್​​ ಸಿಂಗ್​ ಹಾಗೂ ರಾಕೇಶ್​​ ಕೊಳದಲ್ಲಿರುವ ಮೀನುಗಳ ಮೇಲೆ ನಮಗೆ ಕಾನೂನು ಬದ್ಧ ಹಕ್ಕಿದೆ ಎಂದು ವಾದ ಮಾಡಿದ್ದರು.

ಗ್ರಾಮದ ಪ್ರಬಲ ವ್ಯಕ್ತಿಯೊಬ್ಬರು ರಾಕೇಶ್​ ಸಹಾನಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದನ್ನು ಮುಕೇಶ್​ ಸಹಾನಿ ತಡೆಯಲು ಯತ್ನಿಸಿದಾಗ ಆತನ ಮೇಲೆಯೂ ಫೈರಿಂಗ್​ ಮಾಡಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...