alex Certify ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ…..?

ಪಶ್ಚಿಮ ಬಂಗಾಳ- ಮಾನಸಿಕ‌ ಖಿನ್ನತೆಗೆ ಒಳಗಾದವರು ಒಮ್ಮೊಮ್ಮೆ ಏನು ಮಾಡುತ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ಇದೀಗ ಇಲ್ಲೊಬ್ಬ ವ್ಯಕ್ತಿ ತನ್ನ ಮರ್ಮಾಂಗವನ್ನೇ ಕತ್ತರಿಸಿ ಹತ್ತಿರದ ಅರಣ್ಯಕ್ಕೆ ಎಸೆದಿದ್ದಾನೆ. ಈ ಘಟನೆ ನಡೆದಿರೋದು ಪಶ್ಚಿಮ ಬಂಗಾಳದ ಬಂಗಾವ್ ನಲ್ಲಿ.

ಕಳೆದ ಆರು ತಿಂಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶ್ಯಾಮಲ್ ಮುಂಡಾನ ಈ ರೀತಿ ಮಾಡಿಕೊಂಡಿದ್ದಾನೆ. ರಾತ್ರಿ ವೇಳೆ ಹೀಗೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಬೆಳಗ್ಗೆ ಶ್ಯಾಮಲ್ ಅವರ ಸಹೋದರ ನಿರ್ಮಲ್ ಶೌಚಾಲಯದ ಕಡೆ ಬಂದು ನೋಡಿದಾಗ ಈ ಘಟನೆ ಬಯಲಾಗಿದೆ. ತಕ್ಷಣ ಅವರ ತಾಯಿಯನ್ನು ಕರೆದು ತೋರಿಸಿದ್ದಾರೆ.

ಶ್ಯಾಮಲ್ ಅವರನ್ನ ಸಹೋದರ ನಿರ್ಮಲ್ ಕೇಳಿದಾಗ ಮರ್ಮಾಂಗ ಕತ್ತರಿಸಿ ಬಿಸಾಕಿರೋದಾಗಿ ಹೇಳಿದ್ದಾರೆ. ತಕ್ಷಣವೇ ಅವರನ್ನು ಬಂಗಾಲ್ ನ ಉಪಜಿಲ್ಲೆ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯರು ಆತನಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ಹೆಚ್ಚಿನ ಚಿಕಿತ್ಸೆಗೆ ಕೊಲ್ಕತ್ತಾಗೆ ರವಾನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...