alex Certify ಮಹಾಶಿವರಾತ್ರಿ ಅಂಗವಾಗಿ ಲಕ್ಷಕ್ಕೂ ಅಧಿಕ ರುದ್ರಾಕ್ಷಿ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಶಿವರಾತ್ರಿ ಅಂಗವಾಗಿ ಲಕ್ಷಕ್ಕೂ ಅಧಿಕ ರುದ್ರಾಕ್ಷಿ ವಿತರಣೆ

ಶಿವಮೊಗ್ಗ: ಮಹಾಶಿವರಾತ್ರಿಯ ಅಂಗವಾಗಿ ನಗರದ ವಿವಿಧ ಶಿವನ ದೇವಾಲಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರುದ್ರಾಕ್ಷಿಯನ್ನು ಹಂಚಲಾಗುವುದು ಎಂದು ಎಪಿಎಂಸಿ ಮತ್ತು ಸೂಡಾದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕರಾದ ಎಸ್.ಎಸ್.ಜ್ಯೋತಿ ಪ್ರಕಾಶ್ ಅವರು ಹೇಳಿದ್ದಾರೆ.

ಶಿವರಾತ್ರಿಗೆ ಭಕ್ತಾದಿಗಳಿಗೆ ನಮ್ಮ ಕಡೆಯಿಂದ ಏನಾದರೂ ಕೊಡಬೇಕೆಂದು ಎಲ್ಲಾ ಸ್ನೇಹಿತರು ಸೇರಿ ತೀರ್ಮಾನ ಮಾಡಿ ಒಂದು ಲಕ್ಷ ರುದ್ರಾಕ್ಷಿಯನ್ನು ಕೊಡುವುದೆಂದು ಸಲಹೆ ನೀಡಿದ ಹಿನ್ನಲೆಯಲ್ಲಿ ಇಂದು ಭೀಮೇಶ್ವರ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಪೂಜೆ ಸಲ್ಲಿಸಲಾಗಿದೆ.

ನಾಳೆ ಇದನ್ನು ನಗರದ ಎಲ್ಲಾ ಶಿವಾಲಯಗಳಲ್ಲೂ ವಿತರಿಸಲಾಗುವುದು ಮತ್ತು ಪುರೋಹಿತರಿಗೆ ದೊತಿ ಮತ್ತು ಶಲ್ಯ ಕಾರ್ಯಕರ್ತರಿಗೆ ಕೇಸರಿ ಶಾಲನ್ನು ಕೂಡ ವಿತರಿಸಲಾಗುವುದು ನಗರದ ಜನತೆಗೆ ಶಿವರಾತ್ರಿಯ ಶುಭಾಷಯವನ್ನು ಜ್ಯೋತಿ ಪ್ರಕಾಶ್ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...