alex Certify ಮನೆ ಅಂಗಳದಲ್ಲಿ ಏಕಾಏಕಿ ಚಿರತೆ ಪ್ರತ್ಯಕ್ಷ…..! ಬೆಚ್ಚಿಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಅಂಗಳದಲ್ಲಿ ಏಕಾಏಕಿ ಚಿರತೆ ಪ್ರತ್ಯಕ್ಷ…..! ಬೆಚ್ಚಿಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ

ಆಹಾರ ಅರಸುತ್ತಾ ಕಾಡಿನಿಂದ ಬಂದ ಚಿರತೆಯೊಂದು ಮನೆಯೊಂದರ ಅಂಗಳಲ್ಲಿ ಪ್ರತ್ಯಕ್ಷವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಯಂತ್​ ನಿರ್ಮಲ್​ ಎಂಬವರ ಮನೆಯ ಅಂಗಳದಲ್ಲಿ ಚಿರತೆಯು ಕಾಣಿಸಿಕೊಂಡಿದೆ.

ಎಲ್ಲಿಂದಲೋ ಅಂಗಳದ ಕಡೆಗೆ ಬಂದ ಚಿರತೆಯು ಮನೆಯಲ್ಲಿ ಶಬ್ದ ಕೇಳುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿದೆ.

ಜಯಂತ್​ ಮನೆಯವರು ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದ್ದಾರೆ. ಈ ವೇಳೆ ಚಿರತೆ ನಡೆದಾಡಿದ್ದರೆ ಬಗ್ಗೆ ಅವರಿಗೆ ಮಾಹಿತಿ ಲಭ್ಯವಾಗಿದೆ.

ಚಿರತೆ ಮನೆಯಂಗಳಕ್ಕೆ ಆಗಮಿಸಿದ ಸಿಸಿ ಟಿವಿ ದೃಶ್ಯಾವಳಿಯ ವಿಡಿಯೋ ಸ್ಥಳೀಯ ಪ್ರದೇಶದಲ್ಲಿ ಭಾರೀ ವೈರಲ್​ ಆಗಿದೆ. ಗ್ರಾಮ ಪಂಚಾಯ್ತಿಗೆ ತೆರಳಿದ ಜಯಂತ್​ ನಿರ್ಮಲ್​ ಮನೆಯವರು ಅಲ್ಲಿನ ಪದಾಧಿಕಾರಿಗಳಿಗೆ ಚಿರತೆ ಪ್ರತ್ಯಕ್ಷವಾದ ಬಗ್ಗೆ ಮಾಹಿತಿ ರವಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...