alex Certify ಮನೆಯಲ್ಲಿ ಪ್ರತಿ ದಿನ ಕರ್ಪೂರ ಹಚ್ಚಿ ʼಚಮತ್ಕಾರʼ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಪ್ರತಿ ದಿನ ಕರ್ಪೂರ ಹಚ್ಚಿ ʼಚಮತ್ಕಾರʼ ನೋಡಿ

Image result for camphor

ಧರ್ಮ ಗ್ರಂಥದಲ್ಲಿ ದೇವರಿಗೆ ಯಾವುದು ಶ್ರೇಷ್ಠ ಎಂಬುದನ್ನು ಹೇಳಲಾಗಿದೆ. ಯಾವ ವಸ್ತುವಿನಿಂದ ಪೂಜೆ ಮಾಡಿದ್ರೆ ಹೆಚ್ಚು ಫಲ ಸಿಗಲಿದೆ ಎಂಬುದನ್ನೂ ಹೇಳಲಾಗಿದೆ. ದೇವರಿಗೆ ಪ್ರಿಯವಾದ ಪೂಜಾ ಸಾಮಗ್ರಿಗಳಲ್ಲಿ ಕರ್ಪೂರ ಕೂಡ ಒಂದು. ಕರ್ಪೂರದಾರತಿ ಎತ್ತಿದ್ರೆ ದೇವರು ಬೇಗ ಪ್ರಸನ್ನನಾಗ್ತಾನೆ ಎಂಬ ನಂಬಿಕೆಯಿದೆ. ಹಾಗೆ ಕರ್ಪೂರ ನಕಾರಾತ್ಮಕ ಶಕ್ತಿಗಳನ್ನು ನಷ್ಟ ಮಾಡುತ್ತದೆ ಎಂದು ನಂಬಲಾಗಿದೆ.

ಕೆಟ್ಟ ದೃಷ್ಟಿ ಅಥವಾ ಕೆಟ್ಟ ಸಮಯದಿಂದ ಮುಕ್ತಿ ಪಡೆಯಲು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ನೀರಿಗೆ ಗಂಗಾಜಲ ಹಾಗೂ ಸ್ವಲ್ಪ ಕರ್ಪೂರವನ್ನು ಹಾಕಿ ಸ್ನಾನ ಮಾಡಿ. ಜೊತೆಗೆ ದೇವಾನುದೇವತೆಗಳ ಮಂತ್ರ ಪಠಿಸಿ.

ಮನೆಯಲ್ಲಿ ಸುಖ-ಶಾಂತಿ ಬಯಸುವವರು ಬೆಳಿಗ್ಗೆ ಸ್ನಾನವಾದ ನಂತ್ರ ಗಂಗಾಜಲದ ಜೊತೆ ಕರ್ಪೂರ ಬೆರೆಸಿದ ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಿ. ಹೀಗೆ ಮಾಡಿದ್ರೆ ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಆರ್ಥಿಕ ಸಮಸ್ಯೆ ದೂರವಾಗಿ ಹಣದ ವೃದ್ಧಿಯಾಗುತ್ತದೆ.

ಸೂರ್ಯಾಸ್ತದ ವೇಳೆ ಭಗವಂತದ ಕೃಪೆಗೆ ಪಾತ್ರರಾಗಬಯಸುವವರು ಕರ್ಪೂರವನ್ನು ಹಚ್ಚಿ. ಕರ್ಪೂರದ ಹೊಗೆಯನ್ನು ಮನೆಯ ಮೂಲೆ ಮೂಲೆಗೆ ತೋರಿ.

ಬುಧವಾರ ಸ್ವಲ್ಪ ತುಪ್ಪ, ಕರ್ಪೂರ ಹಾಗೂ ಸಕ್ಕರೆಯನ್ನು ದಾನ ಮಾಡಿ. ಜಾತಕದಲ್ಲಿರುವ ಬುಧ ಗ್ರಹ ದೋಷವನ್ನು ಇದು ತೊಡೆದು ಹಾಕುತ್ತದೆ.

ಪ್ರತಿ ದಿನ ಸಂಜೆ ದೇವರ ಮುಂದೆ ಕರ್ಪೂರವನ್ನು ಹಚ್ಚಿ. ಜೊತೆಗೆ ಬೆಡ್ ರೂಮಿನಲ್ಲಿಯೂ ಕರ್ಪೂರವನ್ನು ಹಚ್ಚಿ.  ಇದು ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ ಪತಿ-ಪತ್ನಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...