alex Certify ಮನುಷ್ಯತ್ವವನ್ನೇ ಕಳೆದುಕೊಂಡ ಪೋಷಕರು; ಹಸುಗೂಸನ್ನು ಬೀದಿಗೆ ಬಿಸಾಕಿದ ಹೆತ್ತವರು; ಕಂದಮ್ಮನ ಮೃತದೇಹ ಎಳೆದೊಯ್ದ ನಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯತ್ವವನ್ನೇ ಕಳೆದುಕೊಂಡ ಪೋಷಕರು; ಹಸುಗೂಸನ್ನು ಬೀದಿಗೆ ಬಿಸಾಕಿದ ಹೆತ್ತವರು; ಕಂದಮ್ಮನ ಮೃತದೇಹ ಎಳೆದೊಯ್ದ ನಾಯಿ

ಹಾಸನ: ಬರ ಬರುತ್ತಾ ಮನುಷ್ಯ ಮಾನವೀಯತೆ, ಮನುಷತ್ವ, ಕರುಳುಬಳ್ಳಿ ಸಂಬಂಧಗಳನ್ನು ಮರೆತು ಹೃದಯ ಹೀನನಾಗಿ ಬದುಕುತ್ತಿದ್ದಾನೆ ಎಂಬುದಕ್ಕೆ ಕೆಲ ಘಟನೆಗಳು ಸಾಕ್ಷಿ ಎನಿಸುತ್ತದೆ. ಪೋಷಕರು ಹಸುಗೂಸೊಂದನ್ನು ಬೀದಿಗೆ ಬಿಸಾಕಿ ಹೋಗಿದ್ದು, ಕಂದಮ್ಮನ ಮೃತದೇಹವನ್ನು ಬೀದಿ ನಾಯಿಗಳು ಎಳೆದಾಡಿ ತಂದ ಘಟನೆ ಹಾಸನ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹಾಸನದ ಹೊಸ ಬಸ್ ನಿಲ್ದಾಣದ ಬಳಿ ನಾಯಿಯೊಂದು ಅದ್ಯೇನೋ ಹೊತ್ತೊಯ್ಯುತ್ತಿರುವುದನ್ನು ಕಂಡ ಆಟೋ ಚಾಲಕರು ಹತ್ತಿರ ಹೋಗಿ ನೋಡಿದಾಗ ನಾಯಿಯ ಬಾಯಲ್ಲಿ ಮಗುವಿನ ಕಾಲಿನಂತೆ ಕಂಡಿದ್ದರಿಂದ ಶಾಕ್ ಆಗಿದ್ದಾರೆ.

ಬಸ್ ನಿಲ್ದಾಣದ ಬಳಿಯ ರೈಲ್ವೆ ಟ್ರ್ಯಾಕ್ ಕಡೆಯಿಂದ ಬೀದಿ ನಾಯಿಯೊಂದು ಹಸುಗೂಸಿನ ಮೃತದೇಹ ಹೊತ್ತು ತಂದಿದೆ. ತಕ್ಷಣ ಮಗುವಿನ ಮೃತದೇಹ ಬಿಡಿಸಿದ್ದಾರೆ. ಅದಾಗಲೇ ಕೈಕಾಲು ಭಾಗವನ್ನು ತಿಂದು ಮುಗಿಸಿತ್ತು……. ಮಗುವಿನ ಕರುಳುಬಳ್ಳಿಗೆ ಆಸ್ಪತ್ರೆಯಲ್ಲಿ ಹಾಕಿರುವ ಕ್ಲಿಪ್ ಕೂಡ ಹಾಗೇ ಇತ್ತು ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಹುಟ್ಟಿದ ಗಂಡು ಮಗುವನ್ನು ಹೆತ್ತವರು ರೈಲ್ವೆ ಟ್ರ್ಯಾಕ್ ಬಳಿ ಬಿಸಾಕಿ ಹೋಗಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಹಾಸನ ಬಡಾವಣೆ ಠಾಣೆ ಪೊಲೀಸರು ಮಗುವಿನ ಮೃತದೇಹ ಪಡೆದು ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...