alex Certify ಮನಕಲಕುವ ಘಟನೆ: ತಾಯಿ – ಸಹೋದರಿಯನ್ನು ರಕ್ಷಿಸಿ ಮೃತಪಟ್ಟ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುವ ಘಟನೆ: ತಾಯಿ – ಸಹೋದರಿಯನ್ನು ರಕ್ಷಿಸಿ ಮೃತಪಟ್ಟ ಯುವಕ

ಯುವಕನೊಬ್ಬ ಭಾರಿ ಮಳೆಯ ಕಾರಣಕ್ಕೆ ಮನೆ ಕುಸಿಯುವ ಕೆಲ ಕ್ಷಣಗಳ ಮುನ್ನ ತನ್ನ ತಾಯಿ ಹಾಗೂ ಸಹೋದರಿಯನ್ನು ರಕ್ಷಿಸಿ, ಮೃತಪಟ್ಟಿರುವ ಮನಕಲಕುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಭಾನುವಾರದಂದು ಈ ಘಟನೆ ನಡೆದಿದ್ದು, ಮೂರ್ತಿ ಮೃತಪಟ್ಟ ಯುವಕನಾಗಿದ್ದಾನೆ. ರಾತ್ರಿ ಮನೆ ಮುಂಭಾಗದ ಕೋಣೆಯಲ್ಲಿ ಇವರೆಲ್ಲರೂ ಮಲಗಿದ್ದ ವೇಳೆ ಗುಡುಗು, ಸಿಡಿಲಿನಿಂದ ಕೂಡಿದ ಮಳೆ ಆರಂಭವಾಗಿದೆ.

ಹೀಗಾಗಿ ಒಳಭಾಗಕ್ಕೆ ಹೋಗಲು ಅಣಿಯಾಗುತ್ತಿದ್ದ ವೇಳೆ ಮನೆಯ ಒಂದು ಭಾಗದ ಗೋಡೆ ಕುಸಿದಿದೆ. ಕೂಡಲೇ ತಮ್ಮ ತಾಯಿ ಹಾಗೂ ಸಹೋದರಿಯನ್ನು ದೂರ ತಳ್ಳಿದ್ದು, ಆದರೆ ಗೋಡೆ, ಮೂರ್ತಿ ತಲೆಯ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...