alex Certify ಮಗ ಓಡಿ ಹೋಗಿದ್ದಕ್ಕೆ ತಂದೆಯ ಉಗುರು ಕಿತ್ತ ಹುಡುಗಿಯ ಕುಟುಂಬಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗ ಓಡಿ ಹೋಗಿದ್ದಕ್ಕೆ ತಂದೆಯ ಉಗುರು ಕಿತ್ತ ಹುಡುಗಿಯ ಕುಟುಂಬಸ್ಥರು

ಹುಬ್ಬಳ್ಳಿ: ಮಗನೊಬ್ಬ ಯುವತಿಯೊಂದಿಗೆ ಪರಾರಿಯಾಗಿದ್ದ ತಪ್ಪಿಗೆ ಆಕೆಯ ಕುಟುಂಬಸ್ಥರು, ಹುಡುಗನ ತಂದೆಯ ಮೇಲೆ ಹಲ್ಲೆ ಮಾಡಿ, ಉಗುರು ಕಿತ್ತು ಹಾಕಿರುವ ಘಟನೆ ನಡೆದಿದೆ.

ಈ ಘಟನೆ ನಗರದ ನವನಗರದ ನಂದೀಶ್ವರ ಬಡಾವಣೆಯಲ್ಲಿ ನಡೆದಿದ್ದು, ನೂರ್ ಅಹ್ಮದ್ ಎಂಬುವವರ ಮಗನೇ ತಮ್ಮ ಮಗಳೊಂದಿಗೆ ಪರಾರಿಯಾಗಿದ್ದಾನೆ ಎಂಬ ಕೋಪದಲ್ಲಿ ಕುಟುಂಬಸ್ಥರು ಇದ್ದರು. ಆಗ ಯುವಕನ ತಂದೆಯನ್ನೇ ಕಿಡ್ನಾಪ್ ಮಾಡಿ ಆತನ ಉಗುರು ಕಿತ್ತು, ಮನಬಂದಂತೆ ಥಳಿಸಿದ್ದಾರೆ.

ಮಗ ಮಾಡಿದ ತಪ್ಪಿಗೆ ಸದ್ಯ ಅಪ್ಪ ಆಸ್ಪತ್ರೆ ಸೇರಿದ್ದು, ತಾಯಿ ಕಣ್ಣೀರು ಸುರಿಸುತ್ತಿದ್ದಾಳೆ. ನೂರ್ ಅಹ್ಮದ್ ಬ್ಯಾಹಟ್ಟಿ ಎಂಬುವವರ ಪುತ್ರ ಸುಬಾನಿ ಎಂಬುವವನು ತಾನು ಪ್ರೀತಿಸಿದ್ದ ಯುವತಿಯೊಂದಿಗೆ ಪರಾರಿಯಾಗಿದ್ದ. ಇದಕ್ಕೆ ಯುವತಿಯ ಮನೆಯವರು ಕೆಂಡಾಮಂಡಲವಾಗಿದ್ದಾರೆ. ಯುವಕನ ಮೇಲಿನ ಸಿಟ್ಟಿಗೆ, ಆತನ ತಂದೆಯನ್ನೇ ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಹಲ್ಲೆ ಮಾಡಿದ್ದಲ್ಲದೆ, ಅವರ ಕಾಲಿನ ಉಗುರು ಕಿತ್ತು ಹಿಂಸೆ ನೀಡಿದ್ದಾರೆ.

ಆ ನಂತರ ಆತನ ಕುಟುಂಬಸ್ಥರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಇಬ್ರಾಹಿಂ ಖಾನ್ ಕಿತ್ತೂರ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...