alex Certify ಮಂಡ್ಯದ 5 ರೂಪಾಯಿ ವೈದ್ಯರ ಮುಡಿಗೆ ಮತ್ತೊಂದು ಗರಿ; ಡಾ. ಶಂಕರೇಗೌಡರಿಗೆ ‘ಇಂಡಿಯನ್ ಆಫ್ ದಿ ಇಯರ್’ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡ್ಯದ 5 ರೂಪಾಯಿ ವೈದ್ಯರ ಮುಡಿಗೆ ಮತ್ತೊಂದು ಗರಿ; ಡಾ. ಶಂಕರೇಗೌಡರಿಗೆ ‘ಇಂಡಿಯನ್ ಆಫ್ ದಿ ಇಯರ್’ ಗೌರವ

ಮಂಡ್ಯದ ಐದು ರೂಪಾಯಿ ವೈದ್ಯರೆಂದೇ ಖ್ಯಾತಿ ಪಡೆದಿರುವ ಡಾ. ಎಸ್.ಸಿ. ಶಂಕರೇಗೌಡ ಅವರಿಗೆ ಮತ್ತೊಂದು ಗೌರವ ಸಂದಿದೆ. ಸಿಎನ್ಎನ್ ನ್ಯೂಸ್ 18 ಸಂಸ್ಥೆ ವತಿಯಿಂದ ನೀಡಲಾಗುವ ‘ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿಗೆ ಶಂಕರೇಗೌಡರು ಭಾಜನರಾಗಿದ್ದು, ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಇದನ್ನು ಪ್ರದಾನ ಮಾಡಿದ್ದಾರೆ.

ವೈದ್ಯಕೀಯ ವೆಚ್ಚ ಇಂದು ಮುಗಿಲು ಮುಟ್ಟಿರುವ ಮಧ್ಯೆಯೂ ಶಂಕರೇಗೌಡರು ಕಳೆದ 40 ವರ್ಷಗಳಿಂದ ಕೇವಲ ಐದು ರೂಪಾಯಿ ಶುಲ್ಕ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಕೈಗೆಟಕುವ ಬೆಲೆಯ ಔಷಧಿಗಳನ್ನು ಅವರು ಶಿಫಾರಸ್ಸು ಮಾಡುತ್ತಾರೆ. ಶಂಕರೇಗೌಡರ ಈ ಸಾಮಾಜಿಕ ಕಳಕಳಿಯನ್ನು ಗಮನಿಸಿ ಈಗಾಗಲೇ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದು, ಇದೀಗ ಮತ್ತೊಂದು ಗೌರವ ಸಂದಿದೆ.

ವೈದ್ಯಕೀಯ ವೆಚ್ಚ ಇಂದು ಮುಗಿಲು ಮುಟ್ಟಿರುವ ಮಧ್ಯೆಯೂ ಶಂಕರೇಗೌಡರು ಕಳೆದ 40 ವರ್ಷಗಳಿಂದ ಕೇವಲ ಐದು ರೂಪಾಯಿ ಶುಲ್ಕ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಕೈಗೆಟಕುವ ಬೆಲೆಯ ಔಷಧಿಗಳನ್ನು ಅವರು ಶಿಫಾರಸ್ಸು ಮಾಡುತ್ತಾರೆ. ಶಂಕರೇಗೌಡರ ಈ ಸಾಮಾಜಿಕ ಕಳಕಳಿಯನ್ನು ಗಮನಿಸಿ ಈಗಾಗಲೇ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದು, ಇದೀಗ ಮತ್ತೊಂದು ಗೌರವ ಸಂದಿದೆ.

ಅಲ್ಲದೆ ಸಚಿವ ಅಶ್ವಥ್ ನಾರಾಯಣ ಅವರು ಸಹ ಶಂಕರೇಗೌಡರಿಗೆ ಅಭಿನಂದಿಸಿದ್ದು, ನಮ್ಮ ಮಂಡ್ಯದ 5 ರೂಪಾಯಿ ಡಾ. ಶಂಕರೇಗೌಡ ಅವರಿಗೆ ಪ್ರಶಸ್ತಿ ದೊರಕಿರುವುದು ಅತ್ಯಂತ ಸಂತಸದ ವಿಚಾರ. ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿರುವ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತಾವು ಪಡೆದ ಜ್ಞಾನವನ್ನು ಗ್ರಾಮೀಣ ಜನರ ಸೇವೆಗೆ ಮೀಸಲಿಡುವ ಶಂಕರೇಗೌಡರ ಸಂಕಲ್ಪ ಸದಾ ಪ್ರೇರಣೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...