alex Certify ಭೂ ಮಂಜೂರಾತಿ ಫಲಾನುಭವಿ ಅರ್ಹತೆಗೆ ಆದಾಯ ಮಿತಿ ಹೆಚ್ಚಿಸಿ; ಸಿಎಂ ಹಾಗೂ ಕಂದಾಯ ಸಚಿವರಿಗೆ ಗೃಹ ಸಚಿವರ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂ ಮಂಜೂರಾತಿ ಫಲಾನುಭವಿ ಅರ್ಹತೆಗೆ ಆದಾಯ ಮಿತಿ ಹೆಚ್ಚಿಸಿ; ಸಿಎಂ ಹಾಗೂ ಕಂದಾಯ ಸಚಿವರಿಗೆ ಗೃಹ ಸಚಿವರ ಮನವಿ

ಬೆಂಗಳೂರು: ಭೂ ಮಂಜೂರಾತಿ ಫಲಾನುಭವಿಗಳಿಗೆ ಅರ್ಹತೆ ಗಳಿಸಲು ಆದಾಯ ಮಿತಿ ಹೆಚ್ಚಿಸಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಭೂ ಕಂದಾಯ ಕಾಯಿದೆ 94-C ಅಡಿಯಲ್ಲಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಪಡೆಯಲು ಪ್ರಸ್ತುತ ಇರುವ ವಾರ್ಷಿಕ ಗರಿಷ್ಠ ಆದಾಯದ ಮಿತಿಯನ್ನು ರೂ 30000/- ದಿಂದ ವಾರ್ಷಿಕ ಗರಿಷ್ಟ ರೂ 1,20000/- ಕ್ಕೆ ಮಿತಿಗೆ ಹೆಚ್ಚಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ.

ಆದಾಯದ ಮಿತಿ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯಿದೆ-1964 (ಕರ್ನಾಟಕ ಕಾಯಿದೆ-12 1964) 94-C ಗೆ ತಿದ್ದುಪಡಿ ತಂದು ಗರಿಷ್ಟ ಮಿತಿಯನ್ನು ರೂ 1,20000/- ಕ್ಕೆ ಪರಿಷ್ಕರಿಸಿ ಆದೇಶ ಹೊರಡಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಇದೇ ವೇಳೆ ಆಹಾರ ಇಲಾಖೆಯಲ್ಲಿ ಬಿ ಪಿ ಎಲ್ ಕಾರ್ಡ್ ಫಲಾನುಭವಿಗಳಾಗಲು ಪ್ರಸ್ತುತ ಇರುವ ಆದಾಯದ ಮಿತಿ ರೂ 1,20000/- ಇರುವುದನ್ನು ಗಮನಕ್ಕೆ ತಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...