alex Certify ಬೀಗ ಮುರಿದು ಶಾಲೆ ನುಗ್ಗಿದ ಕಳ್ಳ ಏನೂ ಸಿಗದ ಬೇಸರದಲ್ಲಿ ಕತೆ ಬರೆದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಗ ಮುರಿದು ಶಾಲೆ ನುಗ್ಗಿದ ಕಳ್ಳ ಏನೂ ಸಿಗದ ಬೇಸರದಲ್ಲಿ ಕತೆ ಬರೆದ…!

ಕಳ್ಳತನ ಪ್ರಕರಣಗಳಲ್ಲಿ ಒಮ್ಮೊಮ್ಮೆ ವಿಲಕ್ಷಣ ಘಟನೆಗಳು ವರದಿಯಾಗುತ್ತಿರುತ್ತವೆ. ಮನೆಗೆ ನುಗ್ಗಿದ ಕಳ್ಳರು ಸ್ವತಃ ಅಡುಗೆ ತಯಾರಿಸಿಕೊಂಡು ಅಲ್ಲಿಯೇ ಊಟ ಮಾಡಿದ ಹಲವು ಪ್ರಕರಣಗಳ ಕುರಿತು ಕೇಳಿರುತ್ತೀರಿ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣ ಇದೆಲ್ಲವನ್ನು ಮೀರಿಸಿದಂತಿದೆ.

ಹೌದು, ಇಂತಹದೊಂದು ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ಕಳ್ಳನೊಬ್ಬ ಬೆಲೆಬಾಳುವ ವಸ್ತುಗಳಿಗಾಗಿ ತಡಕಾಡಿದ್ದಾನೆ. ಬೀರು ಬಾಗಿಲು ತೆರೆದು ನೋಡಿದ ಆತನಿಗೆ ನಿರಾಸೆಯಾಗುವಂತೆ ಯಾವುದೇ ವಸ್ತುಗಳು ಸಿಕ್ಕಿಲ್ಲ.

ಇದರಿಂದ ಬೇಸರಗೊಂಡ ಆತ ಕೊನೆಗೆ ಅಂಗನವಾಡಿ ಮಕ್ಕಳಿಗಾಗಿ ಸಂಗ್ರಹಿಸಿಟ್ಟಿದ್ದ ಆಹಾರ ಸಾಮಾಗ್ರಿಗಳಿಂದ ಪುಳಿಯೋಗರೆ ಮಾಡಿಕೊಂಡು ಊಟ ಮಾಡಿದ್ದಾನೆ. ಬಳಿಕ ಅಲ್ಲಿ ಸಿಕ್ಕ ಪುಸ್ತಕವೊಂದರಲ್ಲಿ ಮೂರು ಪುಟಗಳ ಕಥೆ ಬರೆದು ಇದು ನನ್ನಂಥ ಕಳ್ಳರಂತೆ ಕಥೆ ಎಂದು ಹೇಳಿಕೊಂಡಿದ್ದಾನೆ. ಜೊತೆಗೆ ಕವನವನ್ನೂ ಬರೆದಿಟ್ಟಿದ್ದಾನೆ ಈ ಭೂಪ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...