alex Certify ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ; ಸೇಫ್ ಆಗಿ ಮನೆಗೆ ಬಿಟ್ಟು ಪರಾರಿಯಾದ ಕಿಡ್ನಾಪರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ; ಸೇಫ್ ಆಗಿ ಮನೆಗೆ ಬಿಟ್ಟು ಪರಾರಿಯಾದ ಕಿಡ್ನಾಪರ್ಸ್

ಬಾಗಲಕೋಟೆ: 7 ವರ್ಷದ ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಅಪಹರಣಕಾರರೇ ಬಾಲಕಿಯನ್ನು ಸೇಫ್ ಆಗಿ ಮನೆಗೆ ತಂದು ಬಿಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ನಡೆದಿದೆ.

ನಿನ್ನೆ ಟ್ಯೂಷನ್ ಗೆ ಹೋಗಿದ್ದ 7 ವರ್ಷದ ಬಾಲಕಿ ಕೃತಿಕಾಳನ್ನು ಅಪಹರಿಸಿದ್ದ ಕಿಡ್ನಾಪರ್ಸ್, ಬಳಿಕ 50 ಲಕ್ಷ ರೂಪಾಯಿ ನೀಡುವಂತೆ ಪೋಷಕರಿಗೆ ಬೇಡಿಕೆ ಇಟ್ಟಿದ್ದರು. ಕೃತಿಕಾಳ ಮಾವ ಅನಿಲ್ ಬಾಡಂಗಡಿ ಎಂಬಾತನೆ ಕಿಡ್ನಾಪ್ ಮಾಡಿರಬಹುದು ಎಂದು ಕೃತಿಕಾ ಪೋಷಕರಾದ ತಿಪ್ಪಣ್ಣ ಹಾಗೂ ಸುನಿತಾ ಅನುಮಾನ ವ್ಯಕ್ತಪಡಿಸಿದ್ದರು.

ಆದರೆ ಈಗ ಬಾಲಕಿಯನ್ನು ಅಪಹರಿಸಿದ್ದ ಕಿಡ್ನಾಪರ್ಸ್ 16 ಗಂಟೆಗಳಲ್ಲಿ ವಾಪಸ್ ಮನೆಗೆ ಕಳುಹಿಸಿ ಹೋಗಿದ್ದಾರೆ. ಕಾರಿನಲ್ಲಿ ಬಾಲಕಿಯನ್ನು ಮನೆ ಬಳಿ ಬಿಟ್ಟು ಕಿಡ್ನಾಪರ್ಸ್ ಎಸ್ಕೇಪ್ ಆಗಿದ್ದಾರೆ. ಮನೆಗೆ ಬಂದ ಮಗಳನ್ನು ಕಂಡು ಪೋಷಕರು ಸಂತಸಗೊಂಡಿದ್ದಾರೆ.

ನನ್ನನ್ನು ಕಿಡ್ನಾಪ್ ಮಾಡಿದ್ದ ನಾಲ್ವರು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿದ್ದರು. ರಾತ್ರಿ ಕುಡಿಯಲು ಜ್ಯೂಸ್ ಕೊಟ್ಟಿದ್ದರು. ಒಂದಿಬ್ಬರು ಹಿಂದಿ ಮಾತನಾಡುತ್ತಿದ್ದರು ಎಂದು ಬಾಲಕಿ ಪೋಷಕರ ಬಳಿ ಹೇಳಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...