alex Certify ಫೇಲಾಗಿದ್ದ ಮಗಳಿಗೆ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಲಾಗಿದ್ದ ಮಗಳಿಗೆ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ

ಮಗಳು ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ ಎಂಬ ಕಾರಣಕ್ಕೆ ತಾಯಿ ಬೈದಿದ್ದರಿಂದ ಮನ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಆಲ್ದೂರಿನ ಮೇದಾರ ಬೀದಿ ನಿವಾಸಿ 17 ವರ್ಷದ ತುಷಾರ ಶನಿವಾರ ಸಂಜೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆ ಚಿಕ್ಕಮಗಳೂರಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ಹೇಳಲಾಗಿದೆ.

ತಾನು ಫೇಲಾಗಿರುವ ವಿಷಯವನ್ನು ತುಷಾರ ಮನೆಯಲ್ಲಿ ಹೇಳಿರಲಿಲ್ಲವೆನ್ನಲಾಗಿದ್ದು, ಶನಿವಾರ ಕಾಲೇಜು ಸಿಬ್ಬಂದಿ ಫೋನ್ ಮಾಡಿ ತುಷಾರ ತಾಯಿಗೆ ವಿಷಯ ತಿಳಿಸಿದ್ದರು. ಹೀಗಾಗಿ ಮಗಳಿಗೆ ಬೈದು ಅವರು ಬುದ್ಧಿ ಹೇಳಿದ್ದು, ಇದರಿಂದ ಮನನೊಂದ ತುಷಾರ ನೇಣಿಗೆ ಶರಣಾಗಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...