alex Certify ಪ್ರೀತಿಸಿದ್ದೆ ತಪ್ಪಾಯ್ತು…..! ನಡು ರಸ್ತೆಯಲ್ಲೆ ಯುವಕನಿಗೆ ಚಾಕುವಿನಿಂದ ಇರಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿದ್ದೆ ತಪ್ಪಾಯ್ತು…..! ನಡು ರಸ್ತೆಯಲ್ಲೆ ಯುವಕನಿಗೆ ಚಾಕುವಿನಿಂದ ಇರಿತ

ಮೂವರು ವ್ಯಕ್ತಿಗಳು ಇನ್ನೊಬ್ಬ ವ್ಯಕ್ತಿಯನ್ನು ಸುತ್ತುವರೆದು ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಇರಿತಕ್ಕೊಳಗಾದವ ಪರಾರಿಯಾಗಲು ಪ್ರಯತ್ನಿಸಿದಾಗಲೂ ಬಿಡದೆ ಆತನನ್ನ ಪದೇ ಪದೇ ಚಾಕುವಿನಿಂದ ಇರಿದಿದ್ದಾರೆ. ಈ ಘಟನೆ ವಿಡಿಯೋ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ವೀಡಿಯೊದಲ್ಲಿ, ಮೂವರು ವ್ಯಕ್ತಿಗಳು ವ್ಯಕ್ತಿಗೆ ಗುದ್ದುವುದನ್ನು ಮತ್ತು ಕುರ್ಚಿಯಿಂದ ತಲೆಗೆ ಹೊಡೆಯುವುದನ್ನು ಸಹ ಕಾಣಬಹುದು. ಇಷ್ಟೆಲ್ಲಾ ನಡೆಯುತ್ತಿದ್ದರು ಜನರು ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ಬರದೆ ಅಪರಾಧಕ್ಕೆ ವಿಶಾಲ ಸ್ಥಳವಕಾಶ ಮಾಡಿಕೊಟ್ಟಿದ್ದಾರೆ. ಮಾರ್ಕೆಟ್ ಮಧ್ಯದಲ್ಲೆ ಈ ಅಪರಾಧ ನಡೆಯುತ್ತಿದ್ದರು ಯಾರೊಬ್ಬರು ಈ ಮೂವರನ್ನ ತಡೆದಿಲ್ಲ. ಹಲ್ಲೆಗೊಳಗಾದ ವ್ಯಕ್ತಿಯನ್ನ ಶಾರುಖ್ ಎಂದು ಗುರುತಿಸಲಾಗಿದ್ದು, ಘಟನೆ ನಂತರ ಆತನನ್ನ ಜಿಟಿಬಿ ಆಸ್ಪತ್ರೆಗೆ ಸಾಗಿಸಲಾಗಿದೆ.

Shocking News: ಜನವರಿ 1 ರಿಂದ ಅಂಚೆ ಕಚೇರಿ ಖಾತೆದಾರರ ಜೇಬಿಗೆ ಬೀಳಲಿದೆ ಕತ್ತರಿ

ಪೂರ್ವ ದೆಹಲಿಯ ಸೀಮಾಪುರಿ ಮಾರುಕಟ್ಟೆ ಪ್ರದೇಶದಲ್ಲಿ ಬುಧವಾರ ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ. ಪೊಲೀಸರು ನೀಡಿದ ಮಾಹಿತಿಯಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಳೆ ದ್ವೇಷಕ್ಕೆ ಹತ್ಯೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬನಾದ ಜುಬೇರ್ ಎಂಬಾತನ ಸಹೋದರಿಯೊಂದಿಗೆ ಶಾರುಖ್ ಪ್ರೇಮ ಸಂಬಂಧ ಹೊಂದಿದ್ದ. ಜುಬೇರ್ ಸಹೋದರಿಗೆ ಮನೆಯವರೆ ವರನನ್ನ ಹುಡುಕಿದ್ದರು, ಆದರೆ ಶಾರುಖ್ ನೊಂದಿಗೆ ಪ್ರೀತಿಯಲ್ಲಿದ್ದ ಆಕೆ ಮದುವೆಗೆ ಒಪ್ಪಲಿಲ್ಲ. ಜುಬೇರ್ ಮನೆಯವರು ನೋಡಿದ್ದ ವರನ ಕಡೆಯವರಿಗು ಈ ವಿಷಯ ತಿಳಿದು ಸಂಬಂಧ ಮುರಿದಿದ್ದರು.

ಇದರಿಂದ ಕೋಪಗೊಂಡ ಜುಬೇರ್ ಹಾಗೂ ಆತನ ಸಹಚರರಿಬ್ಬರು ಶಾರುಖ್ ಹತ್ಯೆಗೆ ಸಂಚು ರೂಪಿಸಿದ್ದರು. ಸಧ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು, ಮೂರನೇ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...