alex Certify ಪ್ರವಾಸಿಗರೇ ಗಮನಿಸಿ: ಸಕ್ರೆಬೈಲು ತುಂಗಾ ನದಿ ಹಿನ್ನೀರಿನಲ್ಲಿ ಬೋಟಿಂಗ್ ಪುನರಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರೇ ಗಮನಿಸಿ: ಸಕ್ರೆಬೈಲು ತುಂಗಾ ನದಿ ಹಿನ್ನೀರಿನಲ್ಲಿ ಬೋಟಿಂಗ್ ಪುನರಾರಂಭ

ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಇವುಗಳ ಪೈಕಿ ಗಾಜನೂರು ತುಂಗಾ ಡ್ಯಾಮ್ ಸಮೀಪದ ಸಕ್ರೆಬೈಲು ಆನೆ ಬಿಡಾರ ಕೂಡಾ ಒಂದು. ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ತುಂಗಾ ನದಿ ಹಿನ್ನೀರಿನ ದೋಣಿ ವಿಹಾರ.

ಆದರೆ, ಇದು ಕೆಲವು ವರ್ಷಗಳಿಂದ ಸ್ಥಗಿತಗೊಂಡ ಕಾರಣ ಪ್ರವಾಸಿಗರು ನಿರಾಸೆಗೊಂಡಿದ್ದರು. ಇದೀಗ ಅವರಿಗೆ ಖುಷಿ ಸಿಕ್ಕಿದ್ದು, ಜುಲೈ 1ರ ನಾಳೆಯಿಂದ ಬೋಟಿಂಗ್ ಮಾಡುವ ಅವಕಾಶ ಸಿಗಲಿದೆ. ನಾಳೆ ಬೆಳಿಗ್ಗೆ 9:00 ಗಂಟೆಗೆ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಇದಕ್ಕೆ ಚಾಲನೆ ನೀಡಲಿದ್ದಾರೆ.

ಜಂಗಲ್ ರೆಸಾರ್ಟ್ ನಲ್ಲಿ ತಂಗುವವರಿಗೆ ಮಾತ್ರವಲ್ಲದೆ ಆನೆ ಬಿಡಾರಕ್ಕೆ ಆಗಮಿಸುವ ಎಲ್ಲ ಪ್ರವಾಸಿಗರಿಗೂ ಸಹ ಬೋಟಿಂಗ್ ಮಾಡುವ ಅವಕಾಶ ಸಿಗಲಿದ್ದು, ಮುಂದಿನ ದಿನಗಳಲ್ಲಿ ರಾಫ್ಟಿಂಗ್, ಪೆಡಲಿಂಗ್ ಮೂಲಕ ದೋಣಿ ವಿಹಾರಕ್ಕೂ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...