alex Certify ಪ್ರಮುಖ ಧಾರ್ಮಿಕ ಕ್ಷೇತ್ರ ದಕ್ಷಿಣದ ಕಾಶಿ ಗೋಕರ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮುಖ ಧಾರ್ಮಿಕ ಕ್ಷೇತ್ರ ದಕ್ಷಿಣದ ಕಾಶಿ ಗೋಕರ್ಣ

ಗೋಕರ್ಣ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹುಬ್ಬಳ್ಳಿಯಿಂದ ಸುಮಾರು 125 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ ಸುಮಾರು 470 ಕಿಲೋ ಮೀಟರ್ ದೂರದಲ್ಲಿದೆ.

ರಾವಣನಿಂದ ಪ್ರತಿಷ್ಠಾಪಿಸಲ್ಪಟ್ಟ ಆತ್ಮಲಿಂಗ ಇಲ್ಲಿದ್ದು, ಪೌರಾಣಿಕ ಮಹತ್ವದ ಸ್ಥಳಗಳಲ್ಲಿ ಗೋಕರ್ಣ ಮಹತ್ವದ್ದಾಗಿದೆ. ದಕ್ಷಿಣದ ಕಾಶಿ ಎಂದೇ ಕರೆಯಲ್ಪಡುವ ಗೋಕರ್ಣದಲ್ಲಿ ಹಲವು ದೇವಾಲಯಗಳಿವೆ. ಸುಂದರ ಸಮುದ್ರ ತೀರವಿದ್ದು, ಭಕ್ತರು, ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ವಸತಿ ಸೌಲಭ್ಯವಿದ್ದು, ರಾಜ್ಯದ ಪ್ರಮುಖ ನಗರಗಳಿಂದ ಸಾರಿಗೆ ವ್ಯವಸ್ಥೆಯೂ ಇದೆ.

ಗೋಕರ್ಣದ ಸುತ್ತಮುತ್ತ ಅನೇಕ ಪ್ರವಾಸಿ ಸ್ಥಳಗಳಿದ್ದು, ಮಾಹಿತಿ ಪಡೆದುಕೊಂಡು ಹೋದರೆ ಪ್ರವಾಸಕ್ಕೆ ಅನುಕೂಲವಾಗುತ್ತದೆ. ನೀವೂ ಒಮ್ಮೆ ಗೋಕರ್ಣಕ್ಕೆ ಹೋಗಿ ಬನ್ನಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...