alex Certify ‘ಪುಷ್ಪಾ’ ಸಿನಿಮಾದ ವಿಲನ್ ​ಗಳ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪುಷ್ಪಾ’ ಸಿನಿಮಾದ ವಿಲನ್ ​ಗಳ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್​ ಮಾಹಿತಿ

ನಟಿ ರಶ್ಮಿಕಾ ಮಂದಣ್ಣ ಹಾಗೂ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ‌ʼಪುಷ್ಪಾ ದಿ ರೈಸ್ʼ​ ಸಿನಿಮಾ ಬಾಕ್ಸಾಫೀಸಿನಲ್ಲಿ ಭರ್ಜರಿ ಸೌಂಡ್​ ಮಾಡುತ್ತಿದೆ. ಅತ್ಯದ್ಭುತ ಕತೆ, ಅಮೋಘ ನಟನೆ, ಮುಖ್ಯ ಭೂಮಿಕೆಯಲ್ಲಿದ್ದ ಕಲಾವಿದರು ಹೀಗೆ ಪ್ರತಿಯೊಂದು ಕೂಡ ಪುಷ್ಪಾ ಸಿನಿಮಾದ ಪಾಲಿಗೆ ಪ್ಲಸ್​ ಪಾಯಿಂಟ್​ ಆಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಸಿನಿಮಾದ ಬಹುತೇಕ ಹಾಡುಗಳು ಹಾಗೂ ಕೆಲವೊಂದು ಡೈಲಾಗ್​ಗಳಂತೂ ಇಂಟರ್ನೆಟ್​ನಲ್ಲಿ ಭಾರೀ ಸದ್ದು ಮಾಡ್ತಿದೆ.

ಈ ಸಿನಿಮಾದಲ್ಲಿ ಹೀರೋ ಹಿರೋಯಿನ್​ಗಳಷ್ಟೇ, ವಿಲನ್​ ಪಾತ್ರಗಳಿಗೂ ಮಹತ್ವ ನೀಡಲಾಗಿದೆ. ವಿಲನ್​ ಪಾತ್ರದಲ್ಲಿದ್ದ ನಟರೂ ಕೂಡ ತಮ್ಮದೇ ಆದ ನಟನಾ ಶೈಲಿಯಿಂದ ಸಿನಿಮಾದ ತೂಕವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಸಿನಿಮಾದಲ್ಲಿ ವಿಲನ್​ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ಕಲಾವಿದರ ಬಗ್ಗೆ ಕೆಲವು ಕುತೂಹಲಕಾರಿ ವಿಚಾರಗಳು ಇಲ್ಲಿವೆ ನೋಡಿ :

ಜಾಲಿ ರೆಡ್ಡಿ – ಡಾಲಿ ಧನಂಜಯ

ಪುಷ್ಪಾ ಸಿನಿಮಾದಲ್ಲಿರುವ ಜಾಲಿ ರೆಡ್ಡಿ ಪಾತ್ರವು ಎಲ್ಲರಿಗೂ ನೆನಪಿದೆ. ಅದರಲ್ಲೂ ಕನ್ನಡಿಗರಿಗಂತೂ ಈ ಪಾತ್ರ ಅತ್ಯಂತ ಮಹತ್ವದ್ದು. ಏಕೆಂದರೆ ಜಾಲಿ ರೆಡ್ಡಿ ಪಾತ್ರದಲ್ಲಿ ಡಾಲಿ ಧನಂಜಯ ಬಣ್ಣ ಹಚ್ಚಿದ್ದರು. ಧನಂಜಯ ಸ್ಯಾಂಡಲ್​ವುಡ್​ನ ಹೆಸರಾಂತ ನಟ, ಸಾಹಿತ್ಯಕಾರ ಹಾಗೂ ಸಿನಿಮಾ ನಿರ್ಮಾಪಕ ಕೂಡ ಹೌದು. 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿರುವ ಡಾಲಿ ಧನಂಜಯ್​ ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಜಕ್ಕಾ ರೆಡ್ಡಿ – ಷಣ್ಮುಖ

ಈ ಸಿನಿಮಾದಲ್ಲಿ ನಟ ಷಣ್ಮುಖ ಜಕ್ಕಾ ರೆಡ್ಡಿ ಪಾತ್ರದಲ್ಲಿ ಮಿಂಚಿದ್ದಾರೆ. ಜಕ್ಕಾ ರೆಡ್ಡಿಯು ಜಾಲಿ ರೆಡ್ಡಿಯ ಹಿರಿಯ ಸಹೋದರ. ಈತ ಮೂವರು ಸಹೋದರರಲ್ಲಿಯೇ ಅತಿ ಬುದ್ಧಿವಂತ. ಈತನೇ ಶ್ರೀಗಂಧದ ಅಕ್ರಮ ಸಾಗಾಟ ಸೇರಿದಂತೆ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುತ್ತಾನೆ.ಈ ಸಿನಿಮಾದಲ್ಲಿ ಜಕ್ಕಾ ರೆಡ್ಡಿಯನ್ನು ಶಾಂತ ರೂಪಿ ಎಂಬಂತೆ ತೋರಿಸಲಾಗಿದೆ. ಷಣ್ಮುಖ ವಿಶಾಖಪಟ್ಟಣದಲ್ಲಿ ಜನಿಸಿದವರು. ಕಳೆದ ಕೆಲ ವರ್ಷಗಳಿಂದ ಇವರು ತೆಲಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ.

ಕೊಂಡ ರೆಡ್ಡಿ – ಅಜಯ್​ ಘೋಷ್​

ಮೂವರು ರೆಡ್ಡಿ ಸಹೋದರರಲ್ಲಿ ಹಿರಿಯವನೇ ಕೊಂಡ ರೆಡ್ಡಿ. ಈ ಪಾತ್ರವನ್ನು ನಟ ಅಜಯ್​ ಘೋಷ್​ ನಿರ್ವಹಿಸಿದ್ದಾರೆ. ಅಜಯ್​ ಘೋಷ್​ ಮಲಯಾಳಂ ಸಿನಿಮಾಗಳ ಮೂಲಕ ಹೆಸರು ಮಾಡಿದಂತವರು. 2004ರಲ್ಲಿ ಸಿನಿಮಾ ಲೋಕಕ್ಕೆ ಕಾಲಿಟ್ಟ ಅಜಯ್​ 2010ರಲ್ಲಿ ಭೋಜಪುರಿ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದಾರೆ.

ಮಂಗಳಂ ಶ್ರೀನು – ಸುನೀಲ್​

ಮಂಗಳಂ ಶ್ರೀನು ಪಾತ್ರದಲ್ಲಿ ನಟ ಸುನೀಲ್​​ ಕಾಣಿಸಿಕೊಂಡಿದ್ದಾರೆ. ಸುನೀಲ್​ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದರೂ ಸಹ ತೆಲಗು ಇಂಡಸ್ಟ್ರಿಯಲ್ಲಿ ಇವರು ಒಬ್ಬ ಕಾಮಿಡಿಯನ್ ಆಗಿ ಹೆಚ್ಚು ಚಿರಪರಿಚಿತರು.

ದಾಕ್ಷಾಯಿಣಿ – ಅನುಸೂಯಾ ಭಾರದ್ವಾಜ್​

ಈ ಸಿನಿಮಾದಲ್ಲಿ ದಾಕ್ಷಾಯಿಣಿ, ಮಂಗಳಂ ಶ್ರೀನು ಪತ್ನಿ. ಈ ಪಾತ್ರಕ್ಕೆ ನಟಿ ಅನುಸೂಯಾ ಭಾರದ್ವಾಜ್​ ಬಣ್ಣ ತುಂಬಿದ್ದಾರೆ. ಒಬ್ಬ ಖಳನಾಯಕಿಯಾಗಿ ಅನುಸೂಯಾ ಭಾರದ್ವಾಜ್​ ನಟನೆ ಪ್ರೇಕ್ಷಕರ ಮನಗೆದ್ದಿದೆ. ಅನುಸೂಯಾ ತೆಲಗು ಎಂಟರ್​ಟೈನಮೆಂಟ್​ ಇಂಡಸ್ಟ್ರಿಯ ಹೆಸರಾಂತ ನಿರೂಪಕಿ. ಇವರು ಸಾಕಷ್ಟು ಟಿವಿ ಶೋಗಳಲ್ಲಿ ಆ್ಯಂಕರ್​ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...