alex Certify ಪುತ್ರಿ ಮದುವೆ ವಿಚಾರದಲ್ಲಿ ಕಲಹ: ಪತ್ನಿ ಹತ್ಯೆಗೈದು ಪೊಲೀಸರಿಗೆ ಶರಣಾದ ಪತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರಿ ಮದುವೆ ವಿಚಾರದಲ್ಲಿ ಕಲಹ: ಪತ್ನಿ ಹತ್ಯೆಗೈದು ಪೊಲೀಸರಿಗೆ ಶರಣಾದ ಪತಿ..!

ದಂಪತಿ ನಡುವೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದು ಬಳಿಕ ತಿರುಚಿರಾಪಳ್ಳಿಯಲ್ಲಿ ಪೊಲೀಸರ ಎದುರು ಶರಣಾಗಿದ್ದಾನೆ.

ಸೆಲ್ವಂ ಎಂಬ ವ್ಯಕ್ತಿಯು ಕಳೆದ 18 ವರ್ಷಗಳ ಹಿಂದೆ ಸೆಲ್ವಿ ಎಂಬಾಕೆಯನ್ನು ವಿವಾಹವಾಗಿದ್ದ. ಸೆಲ್ವಂ ಹಾಗೂ ಸೆಲ್ವಿ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು.

ಸೆಲ್ವಿ ಮೊದಲು ಮೋಹನ್​​ ಎಂಬಾತನನ್ನು ವಿವಾಹವಾಗಿದ್ದರು ಹಾಗೂ ಈ ದಂಪತಿ ವಿಚ್ಚೇದನ ಪಡೆಯುವ ಮುನ್ನ ಇವರಿಗೆ ಮಣಿವಾಸಕಂ ಹಾಗೂ ಮಹಾಲಕ್ಷ್ಮೀ ಎಂಬ ಇಬ್ಬರು ಮಕ್ಕಳಿದ್ದರು.

ಇತ್ತ ಸೆಲ್ವಂಗೂ ಮೊದಲ ಮದುವೆಯಲ್ಲಿ ಕವಿಯರಸಿ ಎಂಬ ಪುತ್ರಿ ಇದ್ದಳು. 8 ತಿಂಗಳ ಹಿಂದೆ ಸೆಲ್ವಿ ಮನಮದುರೈನಲ್ಲಿರುವ ತನ್ನ ಮನೆಯನ್ನು ಮಾರಿ ಮಹಾಲಕ್ಷ್ಮೀಯ ವಿವಾಹ ಮಾಡಿಸಿದ್ದಳು.

ಮಹಾಲಕ್ಷ್ಮೀಯ ಮದುವೆಯ ಬಳಿಕ ಗಂಡ – ಹೆಂಡತಿ ನಡುವೆ ಜಗಳವಾಗುತ್ತಲೇ ಇತ್ತು. ತನ್ನ ಮಗಳ ಮದುವೆ ವಿಚಾರದಲ್ಲಿ ಸೆಲ್ವಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಸೆಲ್ವಂ ಕೋಪಗೊಂಡಿದ್ದ ಎನ್ನಲಾಗಿದೆ.

ಇದೇ ವಿಚಾರವಾಗಿ ಇಬ್ಬರ ನಡುವೆ ಕಲಹ ಏರ್ಪಟ್ಟಿತ್ತು. ಈ ಕಲಹವು ತಾರಕಕ್ಕೇರಿದ ಹಿನ್ನೆಲೆಯಲ್ಲಿ ಕೋಪಗೊಂಡ ಸೆಲ್ವಂ, ಸೆಲ್ವಿಯನ್ನು ಕೊಲೆಗೈದಿದ್ದಾನೆ. ಈ ಕೃತ್ಯ ಎಸಗಿದ ಮೊದಲು ಸೆಲ್ವಂ ಸ್ಥಳದಿಂದ ಕಾಲ್ಕಿತ್ತಿದ್ದನು ಆದರೆ ಬಳಿಕ ತಿರುಚ್ಚಿ ಠಾಣೆಗೆ ತೆರಳಿ ಪೊಲೀಸರ ಎದುರು ಶರಣಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...