alex Certify ಪರಿಷತ್ ಸ್ಥಾನಕ್ಕೆ ನಾಳೆಯೇ ರಾಜೀನಾಮೆ; ಮನಸ್ಸು ನೋಯಿಸಿದವರಿಗೆ ಒಳ್ಳೆಯದಾಗಲ್ಲ ಎಂದು ಭಾವುಕರಾದ ಸಿ.ಎಂ.ಇಬ್ರಾಹಿಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಷತ್ ಸ್ಥಾನಕ್ಕೆ ನಾಳೆಯೇ ರಾಜೀನಾಮೆ; ಮನಸ್ಸು ನೋಯಿಸಿದವರಿಗೆ ಒಳ್ಳೆಯದಾಗಲ್ಲ ಎಂದು ಭಾವುಕರಾದ ಸಿ.ಎಂ.ಇಬ್ರಾಹಿಂ

ಹುಬ್ಬಳ್ಳಿ: ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಎಂಎಲ್ ಸಿ, ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ನಾಳೆಯೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ, ನಾಳೆಯೇ ಪರಿಷತ್ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ನನ್ನ ಮನಸ್ಸು ನೋಯಿಸಿದವರಿಗೆ ಒಳ್ಳೆಯದಾಗಲ್ಲ. ಅವರು ಕೊಟ್ಟ ಎಂ ಎಲ್ ಸಿ ಸ್ಥಾನವೂ ನನಗೆ ಬೇಡ ಎಂದು ಹೇಳಿದರು.

ಸಿದ್ದರಾಮಯ್ಯ ನನ್ನನ್ನು ಆತ್ಮೀಯ ಎಂದು ಹೇಳ್ತಿದ್ದಾರೆ ಇದೇನಾ ಆತ್ಮೀಯತೆ? ಡಿಕೆಶಿ ದೊಡ್ಡವರು ನಮ್ಮಂತವರನ್ನೆಲ್ಲ ಮಾತಾಡ್ಸಲ್ಲ, ಆರು ತಿಂಗಳ ಹಿಂದೆ ಎಲ್ಲವನ್ನೂ ಸರಿ ಮಾಡ್ತೀನಿ ಎಂದಿದ್ರು… ಬಿಡಿ ಅವರ ಬಗ್ಗೆ ಮಾತನಾಡಲು ಹೋಗಲ್ಲ…ನಾನು ಬಡವ ನನ್ನ ಬಳಿ ದುಡ್ದಿಲ್ಲ, ತುಂಬಾ ನೊಂದಿದ್ದೀನಿ ಎಂದು ಭಾವುಕರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...