alex Certify ಪರಿಕ್ಕರ್ ಪುತ್ರನಿಗೆ ಬಿಗ್ ಶಾಕ್: ಬಯಸಿದ್ದ ಕ್ಷೇತ್ರದಲ್ಲೇ ತಪ್ಪಿದ ಬಿಜೆಪಿ ಟಿಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಕ್ಕರ್ ಪುತ್ರನಿಗೆ ಬಿಗ್ ಶಾಕ್: ಬಯಸಿದ್ದ ಕ್ಷೇತ್ರದಲ್ಲೇ ತಪ್ಪಿದ ಬಿಜೆಪಿ ಟಿಕೆಟ್

ಗೋವಾ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಇಂದು ತನ್ನ 34 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್​ ಮಾಡಿದೆ. ಈ ಪಟ್ಟಿಯಲ್ಲಿ ಗೋವಾ ಮಾಜಿ ಸಿಎಂ ದಿವಂಗತ ಮನೋಹರ್​ ಪರ್ರಿಕ್ಕರ್​ ಅವರ ಪುತ್ರ ಉತ್ಪಲ್​ ಪರ್ರಿಕ್ಕರ್​ ಅವರ ಹೆಸರು ನಾಪತ್ತೆಯಾಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.

1994 ರಿಂದ ಮನೋಹರ್​ ಪರ್ರಿಕ್ಕರ್​ ಸ್ಪರ್ಧಿಸುತ್ತಾ ಬಂದಿರುವ ಪಣಜಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಈ ಬಾರಿ ಕಣಕ್ಕಿಳಿಯಲು ಉತ್ಪಲ್​ ಪರ್ರಿಕ್ಕರ್ ಬಹಳ ಉತ್ಸುಕರಾಗಿದ್ದಾರೆ. ಆದರೆ ಬಿಜೆಪಿಯು ಪಣಜಿ ಕ್ಷೇತ್ರಕ್ಕೆ ಅಟಾನಾಸಿಯೋ ಬಾಬುಶ್​ ಮಾನ್ಸರೇಟ್​​ಗೆ ಮಣೆ ಹಾಕಿದೆ. ಮಾನ್ಸರೇಟ್​ ಹಾಲಿ ಶಾಸಕ ಹಾಗೂ ಮಾಜಿ ಕಾಂಗ್ರೆಸ್​ ನಾಯಕ.
ಉತ್ಪಲ್​ರಿಗೆ ಟಿಕೆಟ್​ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಬಿಜೆಪಿ ಹೇಳಿದ್ದರೂ ಸಹ ಪರ್ರಿಕ್ಕರ್​ ಪುತ್ರ ಪಣಜಿಯಿಂದ ಸ್ಪರ್ಧಿಸುವ ಇಚ್ಛೆಯನ್ನು ಹೊರಹಾಕಿದ್ದಾರೆ. ತಾವು ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದಾರೆ.

ನಾನು ಪಣಜಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ. ಶೀಘ್ರದಲ್ಲಿಯೇ ನನ್ನ ನಿಲುವನ್ನು ತಿಳಿಸುತ್ತೇನೆ ಎಂದು ಉತ್ಪಲ್​ ಪರ್ರಿಕ್ಕರ್​ ಹೇಳಿದ್ದಾರೆ.
ಮನೋಹರ್​ ಪರ್ರಿಕ್ಕರ್​ 1994ರಿಂದ ನಡೆದ ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಪಣಜಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಪ್ರಧಾನಿ ಮೋದಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್​ ಪರ್ರಿಕ್ಕರ್​ 2015ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2017ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ರಚಿಸಲು ಗೋವಾಕ್ಕೆ ಧಾವಿಸಿದ್ದರು. ನಂತರ ಅವರು ಪಣಜಿ ಉಪಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ್ದರು.

ವರದಿಗಳ ಪ್ರಕಾರ ಬಿಜೆಪಿಯ ಉತ್ಪಲ್​ಗೆ ಇನ್ನೆರಡು ಕ್ಷೇತ್ರಗಳ ಆಯ್ಕೆಯನ್ನು ನೀಡಿದೆ ಎನ್ನಲಾಗಿದೆ. ಆದರೆ ಪಕ್ಷದ ಈ ಪ್ರಸ್ತಾಪವನ್ನು ಉತ್ಪಲ್​ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಉತ್ಪಲ್​ ಪಕ್ಷದ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾವು ಭಾವಿಸಿದ್ದೇವೆ. ಬಿಜೆಪಿಯು ಎಂದಿಗೂ ಪರ್ರಿಕ್ಕರ್​ ಕುಟುಂಬಕ್ಕೆ ಗೌರವವನ್ನು ನೀಡುತ್ತದೆ ಎಂದು ಗೋವಾ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವಿಸ್​ ಹೇಳಿದ್ದಾರೆ.

ಉತ್ಪಲ್​ ಕಣಕ್ಕಿಳಿಯಬೇಕು ಎಂದುಕೊಂಡಿರುವ ಕ್ಷೇತ್ರದಲ್ಲಿ ಈಗಾಗಲೇ ಇರುವ ಶಾಸಕರಿಗೆ ಟಿಕೆಟ್​ ನೀಡಲು ನಾವು ನಿರ್ಧರಿಸಿದ್ದೇವೆ. ಹೀಗಾಗಿ ಹಾಲಿ ಶಾಸಕರಿಗೆ ಟಿಕೆಟ್​ ನೀಡದೇ ಇರುವುದು ನ್ಯಾಯವಲ್ಲ. ಇದೇ ಕಾರಣಕ್ಕಾಗಿ ನಾವು ಉತ್ಪಲ್​ಗೆ ಇನ್ನೆರಡು ಕ್ಷೇತ್ರಗಳ ಆಯ್ಕೆಯನ್ನು ನೀಡಿದ್ದೇವೆ ಎಂದು ಹೇಳಿದರು.

ಈ ನಡುವೆ ಇತ್ತ ಆಮ್​ ಆದ್ಮಿ ಪಕ್ಷವು ಉತ್ಪಲ್​ ಪರ್ರಿಕ್ಕರ್​ ಆಫರ್​ ನೀಡಿದ್ದು, ತಮ್ಮ ಪಕ್ಷದಿಂದ ಗೋವಾ ವಿಧಾನಸಭಾ ಚುನಾವಣೆಯನ್ನು ಎದುರಿಸುವಂತೆ ಆಫರ್​ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...