alex Certify ಪಂಜಾಬ್ ಚುನಾವಣಾ ಪ್ರಚಾರ ಕಣಕ್ಕಿಳಿದ ಅರವಿಂದ್​ ಕೇಜ್ರಿವಾಲ್​ ಪತ್ನಿ ಹಾಗೂ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬ್ ಚುನಾವಣಾ ಪ್ರಚಾರ ಕಣಕ್ಕಿಳಿದ ಅರವಿಂದ್​ ಕೇಜ್ರಿವಾಲ್​ ಪತ್ನಿ ಹಾಗೂ ಪುತ್ರಿ

ಪಂಜಾಬ್​ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಪತ್ನಿ ಸುನೀತಾ ಹಾಗೂ ಪುತ್ರಿ ಹರ್ಷಿತಾ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್​ ಮಾನ್​ ಪರವಾಗಿ ಪ್ರಚಾರ ಮಾಡಿದ್ದಾರೆ. ಈ ಬಾರಿ ಮಾನ್​ಗೆ ಸರ್ಕಾರವನ್ನು ನಡೆಸಲು ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಕೇಳಿಕೊಂಡಿದ್ದಾರೆ.

ದೆಹಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಂಡಿರುವ ವಿಚಾರವಾಗಿ ಮಾತನಾಡಿದ ಕೇಜ್ರಿವಾಲ್​ ಪುತ್ರಿ ಹರ್ಷಿತಾ ದೆಹಲಿಯ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಂಡ ಬಗ್ಗೆ ವಿಶ್ವದಾದ್ಯಂತ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ನಾವು ಈ ದೇಶದಲ್ಲಿಯೇ ಇದ್ದುಕೊಂಡು ಇದರ ಅಭಿವೃದ್ಧಿಗೆ ಶ್ರಮಿಸಬೇಕು. ಇದೇ ದೇಶದಲ್ಲಿದ್ದು ಇದೇ ದೇಶಕ್ಕೆ ಸೇವೆ ಸಲ್ಲಿಸಬೇಕೆಂದು ನಾನು ವಿದೇಶಕ್ಕೆ ಹೋಗಲಿಲ್ಲ ಎಂದು ಹರ್ಷಿತಾ ಹೇಳಿದ್ದಾರೆ.

ಪಂಜಾಬ್​ನಲ್ಲಿಯೂ ಅರವಿಂದ ಕೇಜ್ರಿವಾಲ್​ ಹಾಗೂ ಭಗವಂತ್​ ಮಾನ್​​ಗೆ ಒಂದು ಅವಕಾಶ ಮಾಡಿಕೊಡಿ. ಈ ಬಾರಿ ಭಗವಂತ್​ ಮಾನ್​​ರನ್ನು ಪಂಜಾಬ್​ನ ಸಿಎಂ ಆಗಿ ಆಯ್ಕೆ ಮಾಡಿ ಎಂದು ಹರ್ಷಿತಾ ಮನವಿ ಮಾಡಿದರು.

ಕೇಜ್ರಿವಾಲ್ ಅವರ ಪತ್ನಿ ಕೂಡ ಭಗವಂತ್ ಮಾನ್ ಅವರ ಪರವಾಗಿ ಪ್ರಚಾರ ಮಾಡಿದ್ದು, ಅವರು ಕೇಜ್ರಿವಾಲ್ ಅವರಿಗೆ ಸಹೋದರರಂತೆ ಎಂದು ಹೇಳಿದ್ದಾರೆ. ಭಗವಂತ್​ ಮಾನ್​ ಓರ್ವ ಪ್ರಾಮಾಣಿಕ ವ್ಯಕ್ತಿ. ಇವರ ಕನಸು ನನಸು ಮಾಡಲು ಸಹಾಯ ಮಾಡಿ ಎಂದು ಮನವಿ ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...