alex Certify ನಿಮ್ಮ ಬಳಿ ʼಹಣʼ ತೆಗೆದುಕೊಂಡವರು ವಾಪಾಸ್ ನೀಡುತ್ತಿಲ್ಲವೇ….? ಅನುಸರಿಸಿ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ʼಹಣʼ ತೆಗೆದುಕೊಂಡವರು ವಾಪಾಸ್ ನೀಡುತ್ತಿಲ್ಲವೇ….? ಅನುಸರಿಸಿ ಈ ವಿಧಾನ

ಯಾರಾದರೂ ಕಷ್ಟ ಎಂದು ಬಳಿ ಬಂದಾಗ ಕೈಯಲ್ಲಿದ್ದ ಹಣವನ್ನು ಯೋಚನೆ ಮಾಡದೇ ಕೊಟ್ಟುಬಿಡುವ ಜಾಯಮಾನ ಕೆಲವರಲ್ಲಿ ಇರುತ್ತದೆ. ಅವರು ವಾಪಾಸ್ ಕೊಡುತ್ತಾರಾ…? ಇಲ್ವಾ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಹೀಗೆ ಕೊಟ್ಟ ಹಣ ಸಮಯಕ್ಕೆ ಸರಿಯಾಗಿ ಬಾರದೇ ನಾವೇ ತೊಂದರೆಗೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಬರುತ್ತದೆ. ನೀವು ಕೊಟ್ಟ ಹಣ ವಾಪಾಸ್ ನಿಮ್ಮ ಕೈ ಸೇರಬೇಕೆಂದರೆ ಹೀಗೆ ಮಾಡಿ.

ಆಲೂಗಡ್ಡ್ಡೆಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಂಡು ಇದನ್ನು ಸಂಜೆ ಸಮಯದಲ್ಲಿ ಹಸುವಿಗೆ ತಿನ್ನಿಸಿ ಇದರಿಂದ ನೀವು ಕೊಟ್ಟ ಹಣ ನಿಮ್ಮ ಕೈ ಸೇರುತ್ತದೆ. ಆಲೂಗಡ್ಡೆ ಕೂಡ ಶುಕ್ರನ ಒಂದು ಪದಾರ್ಥವಾಗಿದ್ದು ಇದನ್ನು ಗೋಮಾತೆಗೆ ತಿನ್ನಿಸುವುದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗಿ ಅನುಗ್ರಹಿಸುತ್ತಾಳೆ. ಹಾಗೇ ಬೀದಿನಾಯಿಗಳಿಗೂ ಆಹಾರ ನೀಡುವುದರಿಂದ ನಿಮ್ಮ ಗ್ರಹಚಾರಗಳೆಲ್ಲಾ ನಿವಾರಣೆಯಾಗಿ ಕೊಟ್ಟ ಹಣ ವಾಪಾಸ್ ಬರುತ್ತದೆ.

ಇನ್ನು ಆರು ಬುಧವಾರದಂದು ಅಂದರೆ ಒಂದೊಂದು ಬುಧವಾರ ಒಂದೊಂದು ಮಣ್ಣಿನ ಮಡಕೆ ಹಾಗೂ ಮುಚ್ಚಳವನ್ನು ನದಿಯ ನೀರಿನಲ್ಲಿ ತೇಲಿಬಿಡಿ. ಇದರಿಂದ ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ. ಜತೆಗೆ ಕಳೆದುಕೊಂಡ ಹಣ ಮರಳಿ ಸಿಗುತ್ತದೆ. ಶುಕ್ರನು ಅನುಗ್ರಹಿಸುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...