alex Certify ನಮ್ಮದು ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​, ಸಿದ್ದರಾಮಯ್ಯ ತರ ಸರ್ವನಾಶ್​ ಅಲ್ಲ: ಸಿ.ಟಿ. ರವಿ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮದು ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​, ಸಿದ್ದರಾಮಯ್ಯ ತರ ಸರ್ವನಾಶ್​ ಅಲ್ಲ: ಸಿ.ಟಿ. ರವಿ ವ್ಯಂಗ್ಯ

ಪಂಚರಾಜ್ಯ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರವನ್ನು ಪಡೆದಂತೆಯೇ ಕರ್ನಾಟಕದಲ್ಲಿಯೂ ಕೂಡ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಿ.ಟಿ. ರವಿ ವಿಧಾನಸೌಧದಲ್ಲಿ ಹೇಳಿದ್ದಾರೆ.

ನಮ್ಮದು ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್​ ಎಂಬ ನೀತಿಯಿದೆ. ಸಿದ್ದರಾಮಯ್ಯ ತರಹ ಸರ್ವನಾಶ್​ ಎಂಬ ನೀತಿ ನಮ್ಮದಲ್ಲ. ಕಾಂಗ್ರೆಸ್​ ಗೋವಾದಲ್ಲಿ ತಾನೇ ಅಧಿಕಾರಕ್ಕೆ ಬರುತ್ತೆ ಎಂದುಕೊಂಡಿತ್ತು. ಅಲ್ಲಿನ ಕಾಂಗ್ರೆಸ್​ ನಾಯಕರು ಖಾತೆಯನ್ನೂ ಹಂಚಿಕೊಂಡಿದ್ದರು. ಆದರೆ ಚುನಾವಣೆ ಫಲಿತಾಂಶ ಕಾಂಗ್ರೆಸ್​ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ ಎಂದು ಹೇಳಿದರು.

ನವೀನ್​​ ಸಾವು ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಸಿದ್ದರಾಮಯ್ಯ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಉಕ್ರೇನ್​ನಿಂದ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತೀಯರನ್ನು ಮರಳಿ ತಂದಿದ್ದು ಯಾರು..? ನವೀನ್​ ಬಂಕರ್​ನಲ್ಲಿಯೇ ಇರುತ್ತಿದ್ದರೆ ಅವರನ್ನೂ ನಾವು ಭಾರತಕ್ಕೆ ತರುತ್ತಿದ್ದೆವು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...