alex Certify ನಕಲಿ ಸ್ವಾಮೀಜಿ ಹಿಡಿದು ಧರ್ಮದೇಟು ನೀಡಿದ ಸಾರ್ವಜನಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಸ್ವಾಮೀಜಿ ಹಿಡಿದು ಧರ್ಮದೇಟು ನೀಡಿದ ಸಾರ್ವಜನಿಕರು

ಹಾವೇರಿ: ಸ್ವಾಮೀಜಿ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ ನಕಲಿ ಸ್ವಾಮಿಜಿಯನ್ನು ಹಿಡಿದು ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮುಳಥಳ್ಳಿಯಲ್ಲಿ ನಡೆದಿದೆ.

ಗುರುಪಾದಯ್ಯ ವಿರಕ್ತಮಠ ಎಂಬ ನಕಲಿ ಸ್ವಾಮೀಜಿ ಪಾದಪೂಜೆ ಮಾಡಿಸಿಕೊಂಡು ಜನರ ಬಳಿ ಸುಳ್ಳು ಹೇಳಿ ಹಣ ದೋಚಿ ಪರಾರಿಯಾಗುತ್ತಿದ್ದ.

ರೈತರೊಬ್ಬರನ್ನು ನಂಬಿಸಿ ಟ್ರ್ಯಾಕ್ಟರ್ ಗೆ ಟ್ರೈಲರ್ ಮಾಡಿಸಿಕೊಡುವುದಾಗಿ ಹೇಳಿ 5 ಲಕ್ಷ ಹಣ ಪಡೆದು ಸತಾಯಿಸುತ್ತಿದ್ದ. ಹಣ ವಾಪಸ್ ಕೇಳಿದ್ದಕ್ಕೆ ಆವಾಜ್ ಹಾಕುತ್ತಿದ್ದ.

ರೊಚ್ಚಿಗೆದ್ದ ಗ್ರಾಮಸ್ಥರು ನಕಲಿ ಸ್ವಾಮಿಜಿಯನ್ನು ಹಿಡಿದು ವೀರಭದ್ರೇಶ್ವರ ದೇವಸ್ಥಾನದಲ್ಲಿ ಕೂಡಿ ಹಾಕಿ ಧರ್ಮದೇಟು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...