alex Certify ಧಾರವಾಡಕ್ಕೆ ಬಂದಾಗೆಲ್ಲ ಈ ʼದೇಗುಲʼಕ್ಕೆ ತಪ್ಪದೇ ಭೇಟಿ ನೀಡುತ್ತಿದ್ದರು ಪುನೀತ್​ ರಾಜ್​ಕುಮಾರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರವಾಡಕ್ಕೆ ಬಂದಾಗೆಲ್ಲ ಈ ʼದೇಗುಲʼಕ್ಕೆ ತಪ್ಪದೇ ಭೇಟಿ ನೀಡುತ್ತಿದ್ದರು ಪುನೀತ್​ ರಾಜ್​ಕುಮಾರ್​..!

ನಟ ಪುನೀತ್​ ರಾಜ್​ಕುಮಾರ್​​ರ ನಿಧನದಿಂದ ಕನ್ನಡ ಚಿತ್ರರಂಗ ಅಮೂಲ್ಯ ರತ್ನವನ್ನೇ ಕಳೆದುಕೊಂಡಂತಾಗಿದೆ. ಈ ಆಘಾತವನ್ನು ಅರಗಿಸಿಕೊಳ್ಳಲಾಗದ ಕನ್ನಡ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿದೆ.

ಶೂಟಿಂಗ್​ ನಿಮಿತ್ತ ನಟ ಪುನೀತ್​ ರಾಜ್​ಕುಮಾರ್​​ ದೇಶ- ವಿದೇಶಗಳನ್ನು ಸುತ್ತಿದಂತವರು. ಅದೇ ರೀತಿ ಯುವರತ್ನ ಶೂಟಿಂಗ್​ಗಾಗಿ ಧಾರವಾಡಕ್ಕೆ ಬಂದಿದ್ದ ಪುನೀತ್​​ ನುಗ್ಗಿಕೇರಿ ಗ್ರಾಮನದಲ್ಲಿನ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಯುವರತ್ನ ಶೂಟಿಂಗ್​​ಗೆ ಬಂದಿದ್ದ ವೇಳೆ ಮೊದಲ ಬಾರಿಗೆ ಈ ದೇಗುಲಕ್ಕೆ ಬಂದಿದ್ದ ಪುನೀತ್​ ಬಳಿಕ ನುಗ್ಗಿಕೇರಿ ಆಂಜನೇಯನ ಭಕ್ತರಾಗಿದ್ದರು. ಉತ್ತರ ಕರ್ನಾಟಕಕ್ಕೆ ಬಂದಾಗಲೆಲ್ಲ ತಪ್ಪದೇ ಈ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ಕಳೆದ ಒಂದೂವರೆ ವರ್ಷಗಳಲ್ಲಿ ಮೂರು ಬಾರಿ ನುಗ್ಗಿಕೇರಿ ಹನುಮಂತನ ದೇಗುಲಕ್ಕೆ ಪುನೀತ್​ ಭೇಟಿ ನೀಡಿದ್ದರಂತೆ.

ಸದ್ಯ ಜೇಮ್ಸ್​ ಸಿನಿಮಾದ ಚಿತ್ರೀಕರಣ ಪೂರೈಸಿದ್ದ ನಟ ಪುನೀತ್​ ರಾಜ್​ಕುಮಾರ್, ದ್ವಿತ್ವ ಸಿನಿಮಾದ ಮುಹೂರ್ತಕ್ಕೆ ಸಿದ್ಧತೆ ನಡೆಸಿದ್ದರು. ನಿನ್ನೆ ಸಂಗೀತ ನಿರ್ದೇಶಕ ಗುರುಕಿರಣ್​ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪುನೀತ್​ ಶುಭಾಶಯ ಕೋರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...