alex Certify ‘ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ’ ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ’ ಈಶ್ವರಪ್ಪಗೆ ಹಿಂದೂ ಮಹಾಸಭಾ ಸವಾಲ್​

ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದಲ್ಲಿ ತಾನು ಪ್ರಾಮಾಣಿಕ ಎಂದು ಮಾಜಿ ಸಚಿವ ಕೆ.ಎಸ್.​ ಈಶ್ವರಪ್ಪ ಧರ್ಮಸ್ಥಳ ಮಂಜುನಾಥನ ಎದುರು ಪ್ರಮಾಣ ಮಾಡಲಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಸವಾಲ್​ ಎಸೆದಿದೆ.

ಮಂಗಳೂರಿನಲ್ಲಿ ಅಖಿಲ ಭಾರತ ಹಿಂದೂ ಮಹಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಈ ಆಣೆ ಪ್ರಮಾಣದ ಸವಾಲನ್ನು ಎಸೆದಿದ್ದಾರೆ. ನಾನು ಕಮಿಷನ್ ತೆಗೆದುಕೊಂಡಿಲ್ಲ. ಪ್ರಾಮಾಣಿಕ ಇದ್ದೇನೆ ಎಂದು ಈಶ್ವರಪ್ಪ ಹೇಳ್ತಿದ್ದಾರೆ. ಹಾಗಾದರೆ ಅವರು ಧರ್ಮಸ್ಥಳಕ್ಕೆ ಬರಲಿ. ನಾನು ಲಂಚ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಹೇಳಿದರು.

ಈಶ್ವರಪ್ಪ ಪ್ರಮಾಣ ಮಾಡಲು ರೆಡಿ ಇದ್ದೀರಾ..? ಪ್ರಮಾಣ ಮಾಡುವ ತಾಕತ್ತು ನಿಮಗೆ ಇದೆಯಾ..? ನೀವು ಧರ್ಮಸ್ಥಳವನ್ನು ಒಪ್ಪುತ್ತೀರಿ ಎಂದಾದರೆ ಇಲ್ಲಿಗೆ ಬನ್ನಿ ಎಂದು ಧರ್ಮೇಂದ್ರ ಸವಾಲೆಸೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...