alex Certify ದೈವಾರಾಧನೆ ರೀಲ್ಸ್ ಮಾಡೋದು, ಕಾಂತಾರ ಪಾತ್ರ ಅನುಕರಿಸುವುದು ಸರಿಯಲ್ಲ ಎಂದ ರಿಷಬ್ ಶೆಟ್ಟಿ; ಹಾಗಾದ್ರೆ ನೀವು ಮಾಡಿದ್ದೇನು ಎಂದು ಪ್ರಶ್ನಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈವಾರಾಧನೆ ರೀಲ್ಸ್ ಮಾಡೋದು, ಕಾಂತಾರ ಪಾತ್ರ ಅನುಕರಿಸುವುದು ಸರಿಯಲ್ಲ ಎಂದ ರಿಷಬ್ ಶೆಟ್ಟಿ; ಹಾಗಾದ್ರೆ ನೀವು ಮಾಡಿದ್ದೇನು ಎಂದು ಪ್ರಶ್ನಿಸಿದ ನೆಟ್ಟಿಗರು

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಈ ಚಿತ್ರ ಈಗಾಗಲೇ 400 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಗಳಿಕೆಯನ್ನು ಮಾಡಿದ್ದು, ಇನ್ನೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ವಿದೇಶಗಳಲ್ಲೂ ಕೂಡ ‘ಕಾಂತಾರ’ ಮೋಡಿ ಮಾಡಿದ್ದು, ಚಿತ್ರದ ಗಳಿಕೆ ಮುಂದುವರೆಯುತ್ತಲೇ ಇದೆ. ಇದರ ಮಧ್ಯೆ ಕೆಲವರು ದೈವಾರಾಧನೆ ಕುರಿತು ರೀಲ್ಸ್ ಮಾಡಿದ್ದು, ಜೊತೆಗೆ ಇದರ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದರು.

ಇದೆಲ್ಲದರ ಕುರಿತು ಪ್ರತಿಕ್ರಿಯೆ ನೀಡಿದ್ದ ರಿಷಬ್ ಶೆಟ್ಟಿ, ದೈವಾರಾಧನೆ ರೀಲ್ಸ್ ಮಾಡುವುದು, ‘ಕಾಂತರಾ’ ಪಾತ್ರ ಅನುಸರಿಸುವುದು ಸರಿಯಲ್ಲ ಎಂದಿದ್ದರು.

ಈಗ ರಿಷಬ್ ಶೆಟ್ಟಿ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡ ಬಹಳಷ್ಟು ನೆಟ್ಟಿಗರು, ನೀವಾದರೆ ಅದನ್ನು ಮಾಡಬಹುದು. ಬೇರೆಯವರು ಮಾಡಬಾರದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲ ನೆಟ್ಟಿಗರು, ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಿ ಕೋಟಿಗಟ್ಟಲೆ ಹಣ ಗಳಿಸಿ. ಆದರೆ ಸಣ್ಣ ಪುಟ್ಟ ರೀಲ್ಸ್ ಮಾಡಬೇಡಿ ಎಂಬುದು ರಿಷಬ್ ಶೆಟ್ಟಿ ಅವರ ಮಾತಿನ ಅರ್ಥ ಎಂದು ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...