alex Certify ದೇವಾಲಯದ ಬಳಿ ತಂಬಾಕು ಜಗಿದಿದ್ದಕ್ಕೆ ವ್ಯಕ್ತಿಯ ಕೊಲೆ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಗೋಲ್ಡನ್‌ ಟೆಂಪಲ್‌ ಬಳಿ ನಡೆದ ಬರ್ಬರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯದ ಬಳಿ ತಂಬಾಕು ಜಗಿದಿದ್ದಕ್ಕೆ ವ್ಯಕ್ತಿಯ ಕೊಲೆ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಗೋಲ್ಡನ್‌ ಟೆಂಪಲ್‌ ಬಳಿ ನಡೆದ ಬರ್ಬರ ಕೃತ್ಯ

ಪಂಜಾಬ್‌ನ ಅಮೃತಸರದ ಬೀದಿಯಲ್ಲಿ ಬರ್ಬರ ಕೃತ್ಯವೊಂದು ನಡೆದಿದೆ. ವಿಶ್ವಪ್ರಸಿದ್ಧ ಗೋಲ್ಡನ್ ಟೆಂಪಲ್ ಬಳಿಯಿರುವ ಶ್ರೀ ಹರ್ಮಂದಿರ್ ಸಾಹಿಬ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇಬ್ಬರು ನಿಹಾಂಗ್ ಸಿಖ್ಖರ ಮಧ್ಯೆ ತೀವ್ರ ಜಗಳ ನಡೆದಿದ್ದು, ನಂತರ ವ್ಯಕ್ತಿಯನ್ನು ಕೊಲ್ಲಲಾಗಿದೆ. ಗೋಲ್ಡನ್ ಟೆಂಪಲ್ ಬಳಿ ತಂಬಾಕು ಸೇವಿಸಿದ ವಿಚಾರಕ್ಕೆ ಈ ಕೊಲೆ ನಡೆದಿದೆ. ಸಿಸಿ ಟಿವಿಯಲ್ಲಿ ಈ ಕಿತ್ತಾಟ ಹಾಗೂ ಕೊಲೆಯ ದೃಶ್ಯಗಳು ಸೆರೆಯಾಗಿವೆ.

ಇಬ್ಬರು ನಿಹಾಂಗ್ ಸಿಖ್ಖರು ವ್ಯಕ್ತಿಯೊಬ್ಬನೊಂದಿಗೆ ವಾಗ್ವಾದಕ್ಕಿಳಿದಿದ್ದರು. ಕೆಲವೇ ಕ್ಷಣಗಳಲ್ಲಿ ಈ ಜಗಳ ತೀವ್ರವಾಗಿದೆ. ಅವರಲ್ಲಿ ಒಬ್ಬಾತ ಕತ್ತಿಯನ್ನು ಪ್ರದರ್ಶಿಸಿದ್ದಾನೆ. ಕತ್ತಿ ಬೀಸುವ ಮುನ್ನ ಆತನಿಗೆ ಥಳಿಸಿದ್ದಾರೆ. ನಂತರ ಅವನನ್ನು ಅಲ್ಲೇ ಹತ್ಯೆ ಮಾಡಿದ್ದಾರೆ.

ಸುತ್ತಲೂ ಇದ್ದ ಜನರು ಮೃತದೇಹದ ಬಳಿ ಜಮಾಯಿಸುತ್ತಿದ್ದಂತೆ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹೋಟೆಲ್‌ ಹೊರಭಾಗದಲ್ಲಿದ್ದ ಕ್ಯಾಮರಾದಲ್ಲಿ ಹತ್ಯೆಯ ದೃಶ್ಯ ರೆಕಾರ್ಡ್‌ ಆಗಿದೆ. ಸಿಖ್ ದೇಗುಲದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಕೊಲೆ ನಡೆದಿದೆ.

ಬೆಳಗ್ಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ವ್ಯಕ್ತಿಯ ಶವ ರಾತ್ರಿಯಿಡೀ ರಸ್ತೆಯಲ್ಲಿ, ಚರಂಡಿಯ ಪಕ್ಕದಲ್ಲಿಯೇ ಇತ್ತು. ಕೊಲೆಯಾದವನ ಗುರುತು ಇನ್ನೂ ಪತ್ತೆಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...