alex Certify ದೇವಾಲಯದಿಂದ ಆಭರಣ ಕದ್ದ ಕಳ್ಳನಿಗೆ ದೇವರೇ ಶಿಕ್ಷೆ ಕೊಟ್ಟಿದ್ದು ಹೀಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯದಿಂದ ಆಭರಣ ಕದ್ದ ಕಳ್ಳನಿಗೆ ದೇವರೇ ಶಿಕ್ಷೆ ಕೊಟ್ಟಿದ್ದು ಹೀಗೆ..!

ಮಾಡಿದ್ದುಣ್ಣೋ ಮಹರಾಯ ಅನ್ನೋ ಮಾತಿದೆ. ಆಂಧ್ರಪ್ರದೇಶದಲ್ಲಿ ಕಳ್ಳನೊಬ್ಬನಿಗೆ ಇದರ ನೈಜ ಅನುಭವವಾಗಿದೆ. ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇವನಿಗೆ ತಕ್ಕ ದೇವರೇ ಪಾಠ ಕಲಿಸಿದಂತಿದೆ.

ಆರ್‌ ಪಾಪ ರಾವ್‌ ಎಂಬಾತ ದೇವಸ್ಥಾನಕ್ಕೆ ಕನ್ನ ಹಾಕಲು ಪ್ಲಾನ್‌ ಮಾಡಿದ್ದ. ಇದಕ್ಕಾಗಿ ದೇವಾಲಯದ ಒಳನುಗ್ಗಲು ರಂಧ್ರವೊಂದನ್ನು ಕೊರೆದಿದ್ದಾನೆ. ಅಲ್ಲಿಂದ ಒಳಹೊಕ್ಕು ದೇವರ ಆಭರಣಗಳನ್ನೆಲ್ಲ ಎಗರಿಸಿದ್ದಾನೆ. ಬೆಳ್ಳಿ ಆಭರಣಗಳನ್ನೆಲ್ಲ ಕದ್ದುಕೊಂಡು ಹೊರಬರುವಾಗ ತಾನೇ ಕೊರೆದ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ.

ಎಷ್ಟೇ ಕಸರತ್ತು ಮಾಡಿದ್ರೂ ಅಲ್ಲಿಂದ ಹೊರಬರಲು ಸಾಧ್ಯವಾಗಲಿಲ್ಲ. ಬೇರೆ ವಿಧಿಯಿಲ್ಲದೇ ಕಳ್ಳ ಸಹಾಯಕ್ಕಾಗಿ ಕೂಗಿಕೊಂಡ. ಬಳಿಕ ಸ್ಥಳೀಯರು ಅವನನ್ನು ಆ ರಂಧ್ರದಿಂದ ಹೊರಕ್ಕೆ ಎಳೆದಿದ್ದಾರೆ.

ಆತನ ಬಳಿ ದೇವರ ಬೆಳ್ಳಿ ಆಭರಣಗಳನ್ನು ನೋಡಿ ಅವನೊಬ್ಬ ಕಳ್ಳ ಅನ್ನೋದು ದೃಢಪಟ್ಟಿತ್ತು. ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯ್ತು. ಆಭರಣ ಹಾಗೂ ಕಳ್ಳ ಪಾಪ ರಾವ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...