alex Certify ದರ್ಶನ್​ ಹಾಕಿದ ಗೆರೆ ದಾಟಲ್ಲ ಅಂದ್ರು ನಿರ್ಮಾಪಕ ಉಮಾಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ್ಶನ್​ ಹಾಕಿದ ಗೆರೆ ದಾಟಲ್ಲ ಅಂದ್ರು ನಿರ್ಮಾಪಕ ಉಮಾಪತಿ

ಸಿನಿಮೀಯ ರೀತಿಯಲ್ಲಿ ಟ್ವಿಸ್ಟ್​ಗಳನ್ನ ಪಡೆದಿದ್ದ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ ಇದೀಗ ಅಂತ್ಯ ಕಂಡಿದೆ. ಸ್ವತಃ ನಟ ದರ್ಶನ್​​ ನಾವೆಲ್ಲ ಸಾಯುವವರೆಗೂ ಗೆಳೆಯರೇ……ಎಂದು ಹೇಳುವ ಮೂಲಕ ಈ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

ನಟ ದರ್ಶನ್​​ ಪ್ರಕರಣಕ್ಕೆ ತೆರೆ ಎಳೆದ ವಿಚಾರವಾಗಿ ಮಾತನಾಡಿದ ನಿರ್ಮಾಪಕ ಉಮಾಪತಿ, ದರ್ಶನ್​ ಅವರೇ ಈ ಪ್ರಕರಣ ಮುಗಿಸೋಣ ಎಂದು ಹೇಳಿದ ಮೇಲೆ ನಾನು ಮತ್ತೆ ಈ ವಿಚಾರವಾಗಿ ಮಾತನಾಡೋದಿಲ್ಲ. ನಾನು ಈ ಪ್ರಕರಣದಲ್ಲಿ ಕಾನೂನು ರೀತಿಯ ಹೋರಾಟಕ್ಕೆ ಇಳಿಯೋಕೆ ದರ್ಶನ್​ರೇ ಕಾರಣ. ನಾನು ಅವರಿಗಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೆ. ಇದೀಗ ದರ್ಶನ್​​​ ಪ್ರಕರಣ ಅಂತ್ಯ ಮಾಡೋಣ ಎಂದಮೇಲೆ ನಾನು ಸಾಧಿಸಬೇಕಾದದ್ದು ಏನೂ ಬಾಕಿ ಉಳಿದಿಲ್ಲ ಎಂದು ಹೇಳಿದ್ರು.

ಜುಲೈ 15ರಂದು ‘RRR’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ದರ್ಶನ್​ ನನಗೆ ಕರೆ ಮಾಡಿ ಈ ಪ್ರಕರಣ ಅಂತ್ಯ ಮಾಡೋಣ ಎಂದು ಹೇಳಿದ್ರು. ನೀವು ಎಂದಿಗೂ ನಮ್ಮ ನಿರ್ಮಾಪಕರೇ ಅಂದರು ಹೀಗಾಗಿ ನಾನು ಕೂಡ ಈ ಪ್ರಕರಣದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಹಾಗೂ ದರ್ಶನ್​ ನಡುವಿನ ಸಂಬಂಧ ಈ ವ್ಯವಹಾರಗಳನ್ನ ಮೀರಿದ್ದು. ಹರ್ಷ ಕೂಡ ದರ್ಶನ್​ಗಾಗಿ ಫೈಟ್​ ಮಾಡುತ್ತಿದ್ದರು. ನಾನೂ ಸಹ ದರ್ಶನ್​ಗಾಗಿಯೇ ಫೈಟ್​ ಮಾಡುತ್ತಿದ್ದೆ. ನಮಗೆ ದರ್ಶನ್​​ ಅವರು ಮುಖ್ಯ. ಉಳಿದವರ ಬಗ್ಗೆ ನಾವು ತಲೆಕೆಡಿಸಿಕೊಳ್ಳೋದಿಲ್ಲ. ದರ್ಶನ್​ ಅವರ ಹೆಸರು ಇರೋದಕ್ಕೆ ಈ ಪ್ರಕರಣ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ಇಲ್ಲವಾಗಿದ್ರೆ ಇದು ಬೆಳಕಿಗೆ ಬರ್ತಾನೇ ಇರಲಿಲ್ಲ ಎಂದು ಹೇಳಿದ್ರು.

ಇನ್ನು ಇದೇ ವೇಳೆ ಅರುಣಾ ಕುಮಾರಿ ಬಗ್ಗೆಯೂ ಮಾತನಾಡಿದ ಅವರು ಆಕೆಯ ಬಗ್ಗೆ ನಾನು ಏನನ್ನೂ ಮಾತನಾಡಲು ಬಯಸೋದಿಲ್ಲ. ಆಕೆಗೂ ನನಗೂ ಯಾವುದೇ ಸಂಬಂಧ ಇಲ್ಲ. ದರ್ಶನ್​ ಹೇಳಿದ್ದಾರೆ ಹಾಗಾಗಿ ಈ ಪ್ರಕರಣಕ್ಕೆ ಅಂತ್ಯ ಹಾಡುತ್ತಿದ್ದೇವೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...