alex Certify ದರೋಡೆಕೋರರನ್ನು ಬೆನ್ನಟ್ಟಲು ಹೋಗಿ ರೈಲಿನಿಂದ ಜಿಗಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರೋಡೆಕೋರರನ್ನು ಬೆನ್ನಟ್ಟಲು ಹೋಗಿ ರೈಲಿನಿಂದ ಜಿಗಿದ ಮಹಿಳೆ…!

ಲಕ್ನೋ: ಬ್ಯಾಗ್ ದೋಚುತ್ತಿದ್ದ ಖದೀಮರನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ಎಕ್ಸ್‌ಪ್ರೆಸ್ ರೈಲಿನಿಂದ ಹಾರಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಬಂದಾ ನಿಲ್ದಾಣದಲ್ಲಿ ನಡೆದಿದೆ.

ಮಹಿಳೆ ಕೌಶಲ್ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ದುಷ್ಕರ್ಮಿಗಳ ಗುಂಪೊಂದು ತಡರಾತ್ರಿ ಆಕೆಯ ಬ್ಯಾಗ್ ಕದಿಯಲು ಯತ್ನಿಸಿದೆ.

ಇನ್ನೇನು ಬಾಲಕಿಯ ಕಿಡ್ನಾಪ್ ಆಗುತ್ತದೆ ಅಂದುಕೊಂಡಾಗಲೇ ನಡೆಯಿತು ಪವಾಡ..!

ಕೌಶಲ್, ಹಜರತ್ ನಿಜಾಮುದ್ದೀನ್‌ನಿಂದ ಜಬಲ್‌ಪುರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಡಿಂಗ್ವಾಹಿ ನಿಲ್ದಾಣಕ್ಕೆ ಬಂದಾಗ ರೈಲಿನಲ್ಲಿ ಅಡಗಿಕೊಂಡಿದ್ದ ದುಷ್ಕರ್ಮಿಗಳು ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಕೌಶಲ್ ಪ್ರತಿರೋಧ ತೋರಿದ್ದಾರೆ. ದುಷ್ಕರ್ಮಿಗಳು ರೈಲಿನಿಂದ ಹಾರಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ದರೋಡೆಕೋರರನ್ನು ಬೆನ್ನಟ್ಟಲು ಹೋಗಿ ಕೌಶಲ್ ರೈಲಿನಿಂದ ಹಾರಿ ಗಾಯಗೊಂಡಿದ್ದಾರೆ.

ಈ ಘಟನೆಯನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಎಸ್‌ಪಿ ಮೊಹಮ್ಮದ್ ಇಮ್ರಾನ್ ದೃಢಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಮಹಿಳೆಯು ಈ ಬಗ್ಗೆ ಲಿಖಿತ ದೂರು ನೀಡಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...