alex Certify ತಾಳಿ ಕಟ್ಟುವ ವೇಳೆ ಕುಸಿದು ಬಿದ್ದಂತೆ ನಟಿಸಿದ ವಧು; ಮದುಮಗಳ ಹೈಡ್ರಾಮಾ; ಕೊನೇ ಕ್ಷಣದಲ್ಲಿ ಮುರಿದು ಬಿದ್ದ ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಳಿ ಕಟ್ಟುವ ವೇಳೆ ಕುಸಿದು ಬಿದ್ದಂತೆ ನಟಿಸಿದ ವಧು; ಮದುಮಗಳ ಹೈಡ್ರಾಮಾ; ಕೊನೇ ಕ್ಷಣದಲ್ಲಿ ಮುರಿದು ಬಿದ್ದ ಮದುವೆ

ಮೈಸೂರು: ಅದ್ಧೂರಿಯಾಗಿ ಮದುವೆಗೆ ಸಿದ್ಧತೆ ನಡೆಸಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆಯೇ ಮುರಿದು ಬಿದ್ದ ಘಟನೆ ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಗಂಡು-ಹೆಣ್ಣಿನ ಎರಡೂ ಮನೆಯವರೂ ನೋಡಿ ಮದುವೆ ನಿಶ್ಚಯ ಮಾಡಿದ್ದರು. ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿದ್ದು, ಇನ್ನೇನು ವರ, ವಧುವಿನ ಕೊರಳಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ. ಗಾಬರಿಯಿಂದ ಮದುಮಗಳು ಬಿದ್ದಿರಬೇಕು ಎಂದು ನೀರು ಕುಡಿಸಿ ಸಮಾಧಾನ ಮಾಡುತ್ತಿದ್ದಂತೆ ತನಗೆ ವರ ಇಷ್ಟ ಇಲ್ಲ, ಈ ಮದುವೆಯೇ ಬೇಡ ಎಂದು ಹೇಳಿ ಶಾಕ್ ನೀಡಿದ್ದಾಳೆ. ಕೊನೇ ಕ್ಷಣದಲ್ಲಿ ಮದುವೆ ಮುರಿದುಬಿದ್ದಿದೆ.

ವಧು ಸುಣ್ಣದಕೇರಿ ಸಿಂಚನಾ ತನ್ನ ಪಕ್ಕದ ಮನೆಯ ಯುವಕನನ್ನೇ ಪ್ರೀತಿಸಿದ್ದಳಂತೆ ಆದರೆ ಕುಟುಂಬದವರು ಹೆಚ್.ಡಿ. ಕೋಟೆ ತಾಲೂಕಿನ ಯುವಕನೊಂದಿಗೆ ಸಿಂಚನಾ ಮದುವೆ ನಿಶ್ಚಿಯಿಸಿ ಇಂದು ಮದುವೆಯಾಗುವುದರಲ್ಲಿತ್ತು. ಸಿಂಚನಾ ಮದುವೆ ಬೇರೆ ಯುವಕನೊಂದಿಗೆ ನಿಶ್ಚಯವಾಗುತ್ತಿದ್ದಂತೆ ಆಕೆಯ ಪ್ರಿಯತಮ ವರನ ಮನೆಯವರಿಗೆ ಮೆಸೇಜ್ ಮಾಡಿದ್ದನಂತೆ . ಈ ಬಗ್ಗೆ ಸಿಂಚನಾಳಿಗೆ ಕೇಳಿದರೆ, ಮೆಸೇಜ್ ಕಳುಹಿಸಿದ ವ್ಯಕ್ತಿ ಯಾರೆಂದೇ ಗೊತ್ತಿಲ್ಲ. ತನಗೆ ಈ ಮದುವೆ ಇಷ್ಟ ಇದೆ ಎಂದಿದ್ದಳಂತೆ. ಆದರೆ ಈಗ ತಾಳಿ ಕಟ್ಟುವ ವೇಳೆ ಮದುವೆ ಮಂಟಪದಲ್ಲಿ ವಧು, ವರ ತನಗೆ ಇಷ್ಟವಿಲ್ಲ, ತಾನು ಪ್ರೀತಿಸಿದ ಹುಡುಗನನ್ನೇ ವಿವಾಹವಾಗುವುದಾಗಿ ಹೇಳಿ ಹಠ ಹಿಡಿದಿದ್ದಾಳೆ.

ಮದುವೆಯ ದಿನದವರೆಗೂ ಸುಮ್ಮನಿದ್ದು, ತಾಳಿ ಕಟ್ಟುವ ವೇಳೆ ಸಂಬಂಧಿಕರ ಮುಂದೆ ಮದುಮಗಳು ತಮ್ಮ ಮರ್ಯಾದೆ ತೆಗೆದಿದ್ದಾಳೆ, ಅವಮಾನವಾಗಿದೆ ಎಂದು ವರನ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...