alex Certify ‘ತರಕಾರಿ’ಗಳನ್ನು ಯಾವ ರೀತಿ ಬೇಯಿಸಬೇಕು…? ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತರಕಾರಿ’ಗಳನ್ನು ಯಾವ ರೀತಿ ಬೇಯಿಸಬೇಕು…? ಇಲ್ಲಿದೆ ಟಿಪ್ಸ್

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ಅದರಲ್ಲೂ ತರಕಾರಿಗಳನ್ನು ಬೇಯಿಸುವಾಗ ಯಾವ ರೀತಿ ಕೇರ್ ತೆಗೆದುಕೊಳ್ಳಬೇಕು ಅಂತ ತಿಳಿಯೋಣ.

* ಹಾಗಲಕಾಯಿ, ತೊಂಡೆಕಾಯಿ, ಹೀರೆಕಾಯಿ ಮುಂತಾದ ಹಸಿರು ತರಕಾರಿಗಳನ್ನು ಬಣ್ಣ ಮಾಸದಂತೆ, ತೀರಾ ಮೆತ್ತಗಾಗದಂತೆ ಬೇಯಿಸಬೇಕು ಎಂದಾಗ ಸ್ವಲ್ಪ ಸಕ್ಕರೆ ಹಾಕಿ ಬೇಯಿಸಿದರೆ ತರಕಾರಿ ಬಣ್ಣ ಮಾಸುವುದಿಲ್ಲ.

* ಬಟಾಣಿ, ಅವರೆ, ತೊಗರಿ ಮುಂತಾದ ಕಾಳುಗಳನ್ನು ಬೇಯಿಸುವಾಗ ಚಿಟಕಿ ಅರಿಶಿನ ಹಾಗೂ 2 ಹನಿ ಬಾದಾಮಿ ಎಣ್ಣೆಯನ್ನು ಹಾಕಿ ಬೇಯಿಸಿ. ಅದರಿಂದ ಕಾಳುಗಳು ತಾಜಾ ರೀತಿಯಾಗಿಯೇ, ತೀರಾ ಮೆತ್ತಗೆ ಆಗದೆ ಉಂಡೆಯಾಗಿ ಉಳಿದುಕೊಳ್ಳುತ್ತವೆ.

*ಯಾವುದೇ ರೀತಿಯ ಸೊಪ್ಪು ಬೇಯಿಸುವಾಗ ಒಂದು ಚಮಚ ಅಡುಗೆ ಎಣ್ಣೆ ಹಾಕಿದರೆ ಬಣ್ಣ ಮಾಸುವುದಿಲ್ಲ.

* ತರಕಾರಿಗಳನ್ನು ಬೇಯಿಸುವ ಮೊದಲು ಸ್ವಲ್ಪ ಎಣ್ಣೆಯಲ್ಲಿ ಕರಿದು ನಂತರ ನೀರಿನಲ್ಲಿ ಹಾಕಿ ಬೇಯಿಸಿದರೆ ಪಾತ್ರೆ ತಳ ಹಿಡಿಯುವುದಿಲ್ಲ. ಅದಲ್ಲದೇ ಕಡಿಮೆ ಸಮಯದಲ್ಲಿಯೇ ಬೇಯುತ್ತದೆ.

* ಎಣ್ಣೆಯಲ್ಲಿ ಕರಿಯುವ ಕೆಲ ಪದಾರ್ಥಗಳು ಬಾಣಲೆಗೆ ಹಿಡಿದುಕೊಂಡಿರುತ್ತದೆ. ಅದನ್ನು ಉಜ್ಜುವುದು ಕಷ್ಟವಾಗುತ್ತದೆ. ತಳ ಹಿಡಿದ ಬಾಣಲೆಗೆ ತಣ್ಣನೆಯ ನೀರು ಹಾಕಿ 5 ನಿಮಿಷ ನೆನಸಿಡಬೇಕು. ನಂತರ ತೊಳೆದರೆ ಸುಲಭವಾಗಿ ಶುಚಿಯಾಗುತ್ತದೆ.

* ಹಾಲನ್ನು ಕಾಯಿಸುವಾಗ ಪಾತ್ರೆಯ ತುದಿಗೆ ಎಣ್ಣೆಯನ್ನು ಸವರಿ ಇಟ್ಟರೆ ಉಕ್ಕಿ ಕೆಳಗೆ ಚೆಲ್ಲುವುದಿಲ್ಲ.

* ಅಡುಗೆ ಮನೆಯಲ್ಲಿ ಎಣ್ಣೆ ಅಥವಾ ತುಪ್ಪ ಚೆಲ್ಲಿದ್ದರೆ ಚಿಂತೆ ಮಾಡಬೇಡಿ. ಬಿದ್ದ ಜಾಗಕ್ಕೆ ಬ್ಲೀಚಿಂಗ್‌ ಪೌಡರ್‌ ಹಾಕಿ ಕ್ಲೀನ್‌ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...